[ad_1]
ರಾಮಕುಂಜ: ಇಲ್ಲಿನ ಸಂಪ್ಯಾಡಿ ನಿವಾಸಿ ರಾಧಾಕೃಷ್ಣ ಗೌಡ ಅವರ ಪುತ್ರ ದಾಮೋದರ (31ವ) ಮೇ.16 ರಂದು ಬೆಳಗ್ಗೆ ಹಠಾತ್ ಅನಾರೋಗ್ಯಕ್ಕೊಳಗಾಗಿ ಸಾವಿಗೀಡಾಗಿದ್ದಾರೆ.
ದಾಮೋದರ ಅವರು ಕೃಷಿಕರಾಗಿದ್ದು, ಮನೆಯ ಹೊರಗಡೆ ಕುಳಿತಿದ್ದ ಸಂದರ್ಭದಲ್ಲಿ ಹಠಾತ್ ಕುಸಿದು ಬಿದ್ದಿದ್ದು, ಪರಿಣಾಮ ತಲೆಗೆ ಗಾಯವಾಗಿತ್ತು.
ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದುಕೊಂಡು ಹೋದರಾದರೂ ಅಷ್ಟರಲ್ಲೇ ಅವರು ಮೃತಪಟ್ಟಿದ್ದರು ಎಂದು ವರದಿಯಾಗಿದೆ. ಮೃತರು ಅವಿವಾಹಿತರಾಗಿದ್ದು, ತಂದೆ ರಾಧಾಕೃಷ್ಣ ಗೌಡ, ತಾಯಿ ಸುಶೀಲ ಅವರನ್ನು ಅಗಲಿದ್ದಾರೆ. ಮೃತರ ಮನಗೆ ಹಲವು ಗಣ್ಯರು ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ ಎಂದು ವರದಿಯಾಗಿದೆ.
The post ರಾಮಕುಂಜ: ಕೃಷಿಕ ಯುವಕ ಕುಳಿತಲ್ಲಿಯೇ ಬಿದ್ದು ಸಾವು appeared first on Hosakananda.
[ad_2]
Source link

















Leave a Reply