Advertisement

ಕಾಂಕ್ರೀಟ್‌ ಮಿಕ್ಸ್‌ ಸಾಗಿಸುತ್ತಿದ್ದ ಟ್ರಕ್‌ ಕಾರಿನ ಮೇಲೆ ಉರುಳಿಬಿದ್ದು, ಹೈಕೋರ್ಟ್‌ ಹಿರಿಯ ವಕೀಲ ಸಾವು

[ad_1]

ಹೈಕೋರ್ಟ್‌ನ ಹಿರಿಯ ವಕೀಲರೊಬ್ಬರು ಭೀಕರ ಅಪಘಾತದಲ್ಲಿ ಸಾವಿಗೀಡಾದ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಹೈದರಾಬಾದ್‌-ವಿಜಯವಾಡ ಹೆದ್ದಾರಿಯ ಕಾಂಚಿಕಾಚರ್ಲಾ ಮಂಡಲದ ಕೀಸರ ಟೋಲ್‌ ಬೂತ್‌ ಬಳಿ ಕಾಂಕ್ರೀಟ್‌ ಸಾಗಿಸುತ್ತಿದ್ದ ಟ್ರಕ್‌ ಬಿಎಂಡಬ್ಲ್ಯೂ ಕಾರಿನ ಮೇಲೆ ಉರುಳಿ ಬಿದ್ದಿದೆ. ಪರಿಣಾಮ ಐಷರಾಮಿ ಕಾರು ಅಪ್ಪಚ್ಚಿಯಾಗಿದ್ದು, ಅಪಘಾತದಲ್ಲಿ ಹೈಕೋರ್ಟ್‌ನ ಹಿರಿಯ ವಕೀಲರು ಸಾವಿಗೀಡಾಗಿದ್ದಾರೆ.

ಹೈಕೋರ್ಟ್‌ನ ಹಿರಿಯ ವಕೀಲ ಬಿ.ಶ್ರೀನಿವಾಸ್‌ ರಾವ್‌ ಮೃತ ವ್ಯಕ್ತಿ. ಶ್ರೀನಿವಾಸ್‌ ಅಮರಾವತಿಯಲ್ಲಿ ನಡೆದ ಬಾರ್‌ ಕೌನ್ಸಿಲ್‌ ಚುನಾವಣೆಯಲ್ಲಿ ಭಾಗವಹಿಸಿ ಹಿಂತಿರುಗತ್ತಿರುವಾಗ ಈ ಘಟನೆ ನಡೆದಿದೆ.

TS 09 FT 6662 ಸಂಖ್ಯೆಯ ಬಿಎಂಡಬ್ಲ್ಯೂ ಕಾರಿನಲ್ಲಿ ಹೈದರಾಬಾದ್‌ಗೆ ತೆರಳುತ್ತಿದ್ದ ಇವರು ಶನಿವಾರ ಸಂಜೆ 4.15 ರಿಂದ 4.20 ರ ಸುಮಾರಿಗೆ ಕೀಸರ ಟೋಲ್‌ ಪ್ಲಾಜಾ ಬಳಿ ಪ್ರಯಾಣ ಮಾಡುತ್ತಿದ್ದಾಗ ಕಾಂಕ್ರೀಟ್‌ ಮಿಕ್ಸರ್‌ ಸಾಗಿಸುತ್ತಿದ್ದ ಟ್ಯಾಂಕರ್‌ ನಿಯಂತ್ರಣ ಕಳೆದು ಕಾರಿನ ಮೇಲೆ ಬಿದ್ದಿದೆ. ಇದರ ಪರಿಣಾಮ ಕಾರು ಅಪ್ಪಚ್ಚಿಯಾಗಿದ್ದು, ವಕೀಲ ಶ್ರೀನಿವಾಸ್‌ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ.

ಅಪಘಾತದ ನಂತರ ಜೆಸಿಬಿಗಳ ಸಹಾಯದಿಂದ ಟ್ಯಾಂಕರ್‌ ತೆರವು ಮಾಡಲಾಯಿತು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಯಿತು.

banner



[ad_2]

Source link

Leave a Reply

Your email address will not be published. Required fields are marked *