Advertisement

Belthangady : ಮೆದುಳು ಜ್ವರದಿಂದ ಯುವಕ ನಿಧನ!!


Belthangady : ಬೆಳ್ತಂಗಡಿ ತಾಲೂಕಿನ ಕಿಲ್ಲೂರು ರಾಗಿಕುಮೇರ್ ಮನೆ ನಿವಾಸಿ, ಯುವಕ ಶಶಿರಾಜ್ ಪೂಜಾರಿ (34ವ) ಅವರು ಮೆದುಳು ಜ್ವರದಿಂದ ನಿಧನರಾದರು.

ಅವರು  ಕಳೆದ ಕೆಲ ದಿನಗಳಿಂದ ತಲೆನೋವು ಮತ್ತು ಜ್ವರದಿಂದ ಬಳಲುತ್ತಿದ್ದರು. ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎ. 12ರಂದು ಬೆಳಗ್ಗಿನ ಜಾವಜ್ವರ ಕಡಿಮೆಯಾಗದಾಗ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಅವರು ಇಂದು ಬೆಳಿಗ್ಗಿನ ಜಾವ ನಿಧನರಾದರು.

ಮೃತರು ತಂದೆ ಕೊರಗಪ್ಪ ಪೂಜಾರಿ, ತಾಯಿ ಲಲಿತಾ,ಸಹೋದರ ಸಂದೀಪ್ ಪೂಜಾರಿಹಾಗೂ ಬಂಧು ಬಳಗ ಹಾಗೂ ಅಪಾರ ಪ್ರಮಾಣದ ಕುಟುಂಬವರ್ಗದವರನ್ನು ಅಗಲಿದ್ದಾರೆ.





Source link

Leave a Reply

Your email address will not be published. Required fields are marked *