[ad_1]
ಚೆನ್ನೈನ ಎಂಎ ಚಿದಂಬರಂ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026 ಲೀಗ್ ಹಂತದ 22 ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತಂಡ 32ರನ್ಗಳ ಭರ್ಜರಿ ಗೆಲುವನ್ನು ದಾಖಲು ಮಾಡಿತು.
ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ಸಂಜು ಸ್ಯಾಮ್ಸನ್, ಆಯುಷ್ ಮ್ಹಾತ್ರೆ ಹಾಗೂ ಡಿವಾಲ್ಡ್ ಬ್ರೆವಿಸ್ ಉತ್ತಮ ಆಟದಿಂದ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 192 ರನ್ ಮಾಡಿದ್ದು, ಆದರೆ ಈ ಗುರಿಯನ್ನು ಬೆನ್ನಟ್ಟುವಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ 20ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 160 ರನ್ ಮಾಡಿತು.
ಈ ಸಮಯದಲ್ಲಿ ಕೆಕೆಆರ್ ಅಭಿಮಾನಿಯೊಬ್ಬ ಚೆಪಾಕ್ ಕ್ರೀಡಾಂಗಣದಲ್ಲಿ ನಮ್ಮ ತಂಡ ಸೋತರೆ ಇಲ್ಲಿನ ಅಭಿಮಾನಿಗಳು ಕಮ್ಬ್ಯಾಕ್ ಮಾಡಿ ಎಂದು ಶುಭ ಹಾರೈಸುತ್ತಾರೆ. ಆದರೆ ಬೆಂಗಳೂರಿನಲ್ಲಿ ಇದಕ್ಕೆ ವಿರುದ್ಧ, ಅಲ್ಲಿ ಸೋತರೂ, ಗೆದ್ದರೂ ಅಭಿಮಾನಿಗಳು ಟ್ರೋಲ್ ಮಾಡುತ್ತಾರೆ ಹಾಗೂ ಹಲ್ಲೆ ಮಾಡುತ್ತಾರೆ ಎಂದಿದ್ದಾರೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
The post ಸೋತರೂ, ಗೆದ್ದರೂ ಆರ್ಸಿಬಿ ಫ್ಯಾನ್ಸ್ ಹಲ್ಲೆ ಮಾಡ್ತಾರೆ-ಕೆಕೆಆರ್ ಫ್ಯಾನ್ ಆರೋಪ, ವಿಡಿಯೋ ವೈರಲ್ appeared first on Hosakananda.
[ad_2]
Source link

















Leave a Reply