Advertisement

ದೇವರನ್ನು ಬಿಡಿ, ಇನ್ಮುಂದೆ ಮೋದಿ- ಯೋಗಿಯನ್ನು ಮಾತ್ರ ಪೂಜಿಸಿ!! ಬಿಜೆಪಿ ಶಾಸಕನಿಂದ ವಿವಾದಾತ್ಮಕ ಹೇಳಿಕೆ

[ad_1]

UP: ಇದುವರೆಗೂ ನೀವು ಪೂಜಿಸುತ್ತಿರುವ ಮೂರ್ತಿಗಳನ್ನು ವಿಗ್ರಹಗಳನ್ನು ಬಿಟ್ಟು ಇನ್ನು ಮುಂದೆ ಮೋದಿ ಮತ್ತು ಯೋಗಿಯನ್ನು ಪೂಜಿಸಿ ಎಂದು ಬಿಜೆಪಿ ಶಾಸಕರೊಬ್ಬರು ಹೇಳಿಕೆ ನೀಡಿದ್ದು ಭಾರಿ ವಿವಾದವನ್ನು ಸೃಷ್ಟಿಸಿದೆ.

ಉತ್ತರ ಪ್ರದೇಶದ ಹರ್ದೋಯ್ ಜಿಲ್ಲೆಯ ಗೋಪಮೌ ವಿಧಾನಸಭಾ ಕ್ಷೇತ್ರದ ಶಾಸಕ ಶ್ಯಾಮ್ ಪ್ರಕಾಶ್ ವಿಗ್ರಹಾರಾಧನೆಯನ್ನು ಟೀಕಿಸಿ, ಮೋದಿ-ಯೋಗಿಯನ್ನು ಪೂಜಿಸಿ ಎಂದು ಹೇಳಿಕೆ ನೀಡಿದ್ದು, ರಾಜಕೀಯ ವಲಯದಲ್ಲಿ ಭಾರೀ ವಿವಾದ ಎಬ್ಬಿಸಿದೆ.

ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಕಾಶ್, ಜೀವಂತ ಜನರನ್ನು ದೇವರಂತೆ ಪರಿಗಣಿಸುತ್ತೇನೆ. ಜನರಿಗೆ ಸಹಾಯ ಮಾಡುವ ಸಾಮರ್ಥ್ಯ ಅವರಿಗಿದೆ.. ಸೋ, ಕಲ್ಲುಗಳನ್ನು ಪೂಜಿಸುವುದನ್ನು ನಿಲ್ಲಿಸಿ. ಇಂದಿನ ನಿಜವಾದ ದೇವರಾದ ಮೋದಿ ಮತ್ತು ಯೋಗಿಯನ್ನು ಪೂಜಿಸಲು ಪ್ರಾರಂಭಿಸಿ. ಏಕೆಂದರೆ ಅವರು ಮಾತ್ರ ನಮಗೆ ಎಲ್ಲವನ್ನೂ ನೀಡಬಲ್ಲರು ಎಂದು ಅವರು ಹೇಳಿದ್ದಾರೆ. 

ನಂತರ, ಅವರ ಹೇಳಿಕೆ ವಿವಾದಕ್ಕೆ ಗುರಿಯಾದ ಬಳಿಕ ತಮ್ಮ ವೈಯಕ್ತಿಕ ಅಭಿಪ್ರಾಯಗಳು ಮತ್ತು ಮನೆಗಳಲ್ಲಿ ಇರಿಸಲಾಗಿರುವ ಕಲ್ಲುಗಳನ್ನು ಕುಟುಂಬ ದೇವತೆಗಳೆಂದು ಉಲ್ಲೇಖಿಸುತ್ತಿದ್ದೇನೆ ಎಂದು ಅದರಿಂದ ನುಣುಚಿಕೊಳ್ಳುವ ಪ್ರಯತ್ನ ಮಾಡಿದ್ದಾರೆ.

banner



[ad_2]

Source link

Leave a Reply

Your email address will not be published. Required fields are marked *