Advertisement

ನೆರೆಕರೆ ಮನೆಯವರ ಜಗಳ ; ತಲವಾರು, ದೊಣ್ಣೆ ಹಿಡಿದು ಯುವಕರ ರಂಪಾಟ, ವಿಡಿಯೋ ವೈರಲ್, ದೂರು ದಾಖಲು

[ad_1]

ಮಂಗಳೂರು, ಎಪ್ರಿಲ್ 22: ನೆರೆಕರೆ ಮನೆಯವರು  ತಲವಾರು, ದೊಣ್ಣೆ ಹಿಡಿದು ಮಾರಾಮಾರಿ ನಡೆಸಿದ ಘಟನೆ ನಗರದ ಬಂದರು ಠಾಣೆ ವ್ಯಾಪ್ತಿಯ ಬಜಿಲಕರಿಯದಲ್ಲಿ ನಡೆದಿದೆ.

ತಲವಾರು, ರಾಡು, ಕಲ್ಲುಗಳನ್ನು ಹಿಡಿದು ಪರಸ್ಪರ ಹಲ್ಲೆ ಬೀದಿ ಜಗಳ ಮಾಡಿದ್ದಾರೆ. ಘಟನೆಯ ವಿಡಿಯೋವನ್ನು ಅವರೇ ಮಾಡಿಕೊಂಡಿದ್ದು ಜಾಲತಾಣದಲ್ಲಿ ಲೀಕ್ ಆಗಿದೆ. ಘಟನೆ ಸಂಬಂಧಿಸಿ ಬಂದರು ಠಾಣೆಯಲ್ಲಿ ಎರಡೂ ಕುಟುಂಬಗಳು ಪರಸ್ಪರ ದೂರು ನೀಡಿದ್ದಾರೆ. ಪರಸ್ಪರ ಜೀವ ಬೆದರಿಕೆ ಒಡ್ಡಿದ ಬಗ್ಗೆ ಕುಟುಂಬ ಸದಸ್ಯರು ಆರೋಪ ಮಾಡಲಾಗಿದೆ.

ಘಟನೆಯಲ್ಲಿ ಮಹಿಳೆ ಸೇರಿ ಮೂವರಿಗೆ ಸಣ್ಣಪುಟ್ಟ ಗಾಯವಾಗಿದ್ದು ವೆನ್ಹಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಅನಿತಾ (51) ಎಂಬವರು ನೀಡಿದ ದೂರಿನ ಮೇರೆಗೆ ಮಹೇಶ್ ಶೆಟ್ಟಿ ಪ್ರೀತಂ ಶೆಟ್ಟಿ ಮನೀಶ್ ಶೆಟ್ಟಿ, ಜಿತೇಶ್ ಎಂಬರ ವಿರುದ್ಧ ಪ್ರಕರಣ ದಾಖಲಾಗಿದೆ. ಸುನಿತಾ ಶೆಟ್ಟಿ ಎಂಬವರು ನೀಡಿದ ದೂರಿನಂತೆ ತೇಜಸ್, ಲೋಕೇಶ್, ಅನಿತಾ ಎಂಬರ ವಿರುದ್ಧ ಪ್ರಕರಣ ಪ್ರಕರಣ ದಾಖಲಿಸಿರುವ ಬಂದರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

 

banner



[ad_2]

Source link

Leave a Reply

Your email address will not be published. Required fields are marked *