Advertisement

Hariyana: ಎಂಗೇಜ್ಮೆಂಟ್ ಆದ ಹುಡುಗಿಯ ಜೊತೆ ಲೈಂಗಿಕ ಸಂಪರ್ಕ

[ad_1]

Hariyana: ಆ ಹುಡುಗನಿಗೆ ಕೆಲವು ದಿನಗಳ ಹಿಂದಷ್ಟೇ ಎಂಗೇಜ್ಮೆಂಟ್ ಆಗಿತ್ತು. ಇನ್ನು ಕೆಲವೇ ದಿನಗಳಲ್ಲಿ ಮದುವೆಯೂ ಆಗಲಿದ್ದ. ಕೊಂಚ ಕಾದಿದ್ದರೆ ಎಲ್ಲವೂ ಸರಿ ಇರುತ್ತಿತ್ತು. ಆದರೆ ಆತ ಆತುರ ಮಾಡಿದ. ಮದುವೆಯ ಮುಂಚಿತವಾಗಿಯೇ ಆ ಮ್ಯಾಟರ್ ಗೆ ಆಸೆ ತೋರಿ ಜೀವವನ್ನೇ ಕಳೆದುಕೊಂಡ. ಅವಸರವೇ ಅಪಘಾತಕ್ಕೆ ಕಾರಣ ಎಂಬುದನ್ನು ಸಾಬೀತುಪಡಿಸಿದ.

ಹೌದು, ಹರಿಯಾಣದ ಗುರು ಗ್ರಾಮ ಒಂದರಲ್ಲಿ ಯುವಕನೊಬ್ಬನಿಗೆ ಕೆಲವು ದಿನಗಳ ಹಿಂದಷ್ಟೇ ಎಂಗೇಜ್ಮೆಂಟ್ ಆಗಿತ್ತು. ಎಂಗೇಜ್ಮೆಂಟ್ ಆದ ಹುಡುಗಿಯೊಂದಿಗೆ ದೈಹಿಕ ಸಂಪರ್ಕ ಬೆಳೆಸಲು ಮುಂದಾದ ಆತ  ವಯಾಗ್ರವನ್ನು ಸೇವಿಸಿದ್ದಾನೆ. ಆದರೆ ಅದು ಅತಿಯಾಗಿದೆ. ಹೀಗಾಗಿ ಓವರ್ ಡೋಸ್ ನಿಂದಾಗಿ ಆತ ತನ್ನ ಪ್ರಾಣವನ್ನು ಕಳೆದುಕೊಂಡಿದ್ದಾನೆ.

ಮೃತನನ್ನು ನಾಗ್ಪುರ ಮೂಲದ ರೋಹಿತ್ ಲಾಲ್ (29) ಎಂದು ಗುರುತಿಸಲಾಗಿದೆ. ಈತ ದೆಹಲಿಯ ‘ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾ’ ಕಚೇರಿಯಲ್ಲಿ ಉದ್ಯೋಗಿಯಾಗಿದ್ದು, ಗುರುಗ್ರಾಮದ ಸೆಕ್ಟರ್ 53ರ ಪಿಜಿಯೊಂದರಲ್ಲಿ ಬಾಡಿಗೆಗೆ ವಾಸವಾಗಿದ್ದನು. ಸ್ನೇಹಿತನೊಬ್ಬನ ಕರೆಗೆ ಉತ್ತರಿಸದಿದ್ದಾಗ ಆತ ಪೊಲೀಸರಿಗೆ ಕರೆ ಮಾಡಿದ್ದಾನೆ. ಬಳಿಕ ಸ್ಥಳಕ್ಕೆ ಬಂದ ಪೊಲೀಸರು ಬಾಗಿಲು ಒಡೆದು ನೋಡಿದಾಗ ರೋಹಿತ್ ಮೃತಪಟ್ಟಿರುವುದು ತಿಳಿದುಬಂದಿದೆ.

ಪೊಲೀಸರು ತಪಾಸಣೆ ನಡೆಸಿದಾಗ ಕೊಠಡಿಯಲ್ಲಿ ಕೆಲವು ಲೈಂಗಿಕ ಉತ್ತೇಜಕ ಮಾತ್ರೆಗಳ ಖಾಲಿ ಪ್ಯಾಕೆಟ್‌ಗಳು ಹಾಗೂ ಹೆಲ್ತ್ ಸಪ್ಲಿಮೆಂಟ್‌ಗಳು ಪತ್ತೆಯಾಗಿವೆ. ಪ್ರಾಥಮಿಕ ತನಿಖೆಯ ಪ್ರಕಾರ, ರೋಹಿತ್ ಅಂದು ನಾನು ಎಂಗೇಜ್ಮೆಂಟ್ ಮಾಡಿಕೊಂಡ ಇವತ್ತಿಯನ್ನು ಭೇಟಿಯಾಗಲು ಕರೆದಿದ್ದನು. ಆಕೆಯ ಬರುವಿಕೆಗಾಗಿ ಕಾಯುತ್ತಿದ್ದ ರೋಹಿತ್, ಲೈಂಗಿಕ ಸಾಮರ್ಥ್ಯ ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಮಾತ್ರೆಗಳನ್ನು ಸೇವಿಸಿದ್ದ. ಆದರೆ, ಈ ಮಾತ್ರೆಗಳ ಅತಿಯಾದ ಸೇವನೆಯಿಂದ (Overdose) ತೀವ್ರ ಹೃದಯಾಘಾತ ಸಂಭವಿಸಿ ಆತ ಮೃತಪಟ್ಟಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

banner

“ಸ್ಥಳದಲ್ಲಿ ದೊರೆತ ಔಷಧಿ ಮಾತ್ರೆಗಳು ಮತ್ತು ಮೃತನ ವಿಸೇರಾವನ್ನು (Viscera) ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ಕಳುಹಿಸಲಾಗಿದೆ. ವರದಿ ಬಂದ ನಂತರವಷ್ಟೇ ಸಾವಿಗೆ ನಿಖರವಾದ ಕಾರಣ ತಿಳಿದುಬರಲಿದೆ. ಸದ್ಯಕ್ಕೆ ಇದು ಮಿತಿಮೀರಿದ ಔಷಧಿ ಸೇವನೆಯಿಂದಾದ ಸಾವು ಎಂದು ಮೇಲ್ನೋಟಕ್ಕೆ ಕಂಡುಬರುತ್ತಿದೆ,” ಎಂದು ಸೆಕ್ಟರ್ 53ರ ಠಾಣಾಧಿಕಾರಿ ಸತೇಂದ್ರ ರಾವಲ್ ತಿಳಿಸಿದ್ದಾರೆ.



[ad_2]

Source link

Leave a Reply

Your email address will not be published. Required fields are marked *