Advertisement

ಪುನೀತ್ ರಾಜಕುಮಾರ್ ಸಮಾಧಿಗೆ ಸರ್ಕಾರ ಜಾಗ ಕೊಟ್ಟಿದ್ದು ಸರಿಯಲ್ಲ

[ad_1]

 ನಟ ಚೇತನ್ ಅಹಿಂಸ ಅವರು ಇತ್ತೀಚಿಗಷ್ಟೇ ರಾಜಕುಮಾರ್ ಅವರ ಜನ್ಮದಿನದಂದು ರಾಜಕುಮಾರ್ ಸಮಾಧಿಗೆ ಸರ್ಕಾರ ಅಷ್ಟು ಜಾಗ ಕೊಟ್ಟಿರುವುದು ಸರಿಯಲ್ಲ ಎಂದು ನಾಲಿಗೆ ಹರಿಬಿಟ್ಟಿದ್ದರು. ಈ ಬೆನ್ನಲ್ಲೇ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದಾಗ ಸಾರ್ವಜನಿಕವಾಗಿ ಕ್ಷಮೆ ಕೂಡ ಕೇಳಿದಿದ್ದರು. ಆದರೆ ತಮ್ಮ ಮೊಂಡಾಟವನ್ನು ಇಲ್ಲಿಗೆ ನಿಲ್ಲಿಸದ ಚೇತನ್ ಅವರು ಪುನೀತ್ ರಾಜಕುಮಾರ್ ಸಮಾಧಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಜೀ ಕನ್ನಡ ನ್ಯೂಸ್ ಜೊತೆ ಮಾತನಾಡಿರುವ ಅವರು ಪುನೀತ್ ರಾಜ್‌ಕುಮಾರ್ ಅವರ ಸಮಾಧಿಗೆ ಸರ್ಕಾರ ಜಾಗ ನೀಡಿರುವ ವಿಚಾರದ ಕುರಿತು, ಸರ್ಕಾರದ ಕ್ರಮದ ಬಗ್ಗೆ ತಮ್ಮ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಮಾತಿನ ಆರಂಭದಲ್ಲೇ ಅಪ್ಪು ಸಮಾಧಿಗೆ ಜಾಗ ಕೊಟ್ಟಿದ್ದು ನನಗೆ ಬೇಸರವಿದೆ’ಎಂದು ಹೇಳಿದ ಚೇತನ್, ಇದರಲ್ಲಿ ಸರ್ಕಾರದ ರಾಜಕೀಯ ಹಿತಾಸಕ್ತಿ ಅಡಗಿದೆ ಎಂದು ಆರೋಪಿಸಿದರು. 

ರಾಜ್‌ಕುಮಾರ್ ಅವರ ರೀತಿಯಲ್ಲೇ ಸಮಾಜಕ್ಕೆ ಅಪಾರ ಕೊಡುಗೆ ನೀಡಿದ ಎಷ್ಟೋ ಸಾಧಕರಿದ್ದಾರೆ. ಆದರೆ ಅಂತಹ ಸಾಧಕರಿಗೆ ಯಾಕೆ ಸಮಾಧಿಗೆ ಜಾಗದ ಅವಕಾಶ ಕೊಟ್ಟಿಲ್ಲ? ಯಾಕೆಂದರೆ ಸರ್ಕಾರಗಳು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಈ ರೀತಿ ಭೂಮಿ ಕೊಡುವ ನಾಟಕವಾಡುತ್ತವೆ ಎಂದು ಕಿಡಿಕಾರಿದ್ದಾರೆ.



[ad_2]

Source link

Leave a Reply

Your email address will not be published. Required fields are marked *