Advertisement

ಎಂಗೇಜ್​​ಮೆಂಟ್ ಆದ ರಾತ್ರಿಯೇ ಇಬ್ರಾಹಿಂ ಜೊತೆ ಯುವತಿ ಎಸ್ಕೇಪ್​

[ad_1]

ಹುಬ್ಬಳ್ಳಿಯ ಬೆನ್ನಲ್ಲೇ ಹಾವೇರಿಯಲ್ಲೂ ಲವ್ ಜಿಹಾದ್ ಆರೋಪಗಳು ಕೇಳಿ ಬಂದಿದ್ದು, ಇಂದು ನಡೆಯಬೇಕಿದ್ದ ಎಂಗೇಜ್​ಮೆಂಟ್ ಮುರಿದು ಬಿದ್ದಿದ್ದು, ನಿಶ್ಚಿತಾರ್ಥ ಮಾಡಿಕೊಳ್ಳಬೇಕಿದ್ದ ಯುವತಿ ಮಧ್ಯರಾತ್ರಿಯೇ ನಾಪತ್ತೆಯಾಗಿದ್ದಾಳೆ.

ಮಗಳ ಎಂಗೇಜ್​ಮೆಂಟ್​ನನ್ನು ಅದ್ದೂರಿಯಾಗಿ ಮಾಡಲು ಕುಟುಂಬಸ್ಥರಿ ತಯಾರಿ ಮಾಡಿಕೊಂಡಿದ್ರು. ಮೇ 11ಕ್ಕೆ ಮದುವೆ ಡೇಟ್ ಕೂಡ ಫಿಕ್ಸ್ ಆಗಿತ್ತು. ಆದ್ರೆ ಹಸೆಮಣೆ ಏರಬೇಕಿದ್ದ ಯುವತಿ ರಾತ್ರೋ ರಾತ್ರಿ ಪರಾರಿಯಾಗಿ ಮನೆ ಮಂದಿಗೆ ಶಾಕ್​ ಕೊಟ್ಟಿದ್ದಾಳೆ. 

ಹಿಂದೂ ಯುವತಿ ಶಂಕ್ರಮ್ಮ ಎಂಬಾಕೆಯನ್ನ ಮುಸ್ಲಿಂ ಯುವಕ ಇಬ್ರಾಹಿಂ ಎಂಬಾತನೇ ಕರೆದುಕೊಂಡು ಹೋಗಿದ್ದಾನೆ ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ. ಹಾನಗಲ್ ನ ಹಿಂದೂ ಯುವತಿ ಶಂಕ್ರಮ್ಮ, ಬಿ.ಕಾಂ ಪದವಿ ಪಡೆದು ಅಕ್ಕಿ ಆಲೂರಿಗೆ ಕೆಲಸಕ್ಕೆ ಹೋಗ್ತಿದ್ದಳು. ಮೇ 11ಕ್ಕೆ ಯುವತಿಗೆ ಮದುವೆ ಮಾಡಲು ಹಿರಿಯರು ನಿಶ್ಚಯ ಮಾಡಿದ್ರು.ರಾತ್ರಿ ನಿಶ್ಚಿತಾರ್ಥದ ಹುಡುಗನ ಜತೆ ಪೋನ್ ನಲ್ಲಿ ಮಾತನಾಡಿದ್ದ ಯುವತಿ ಬೆಳಗ್ಗೆ ಆಗುವಷ್ಟರಲ್ಲಿ ನಾಪತ್ತೆಯಾಗಿದ್ದಾಳೆ

ಲವ್ ಜಿಹಾದ್ ವಿರುದ್ಧ ಜಿಲ್ಲೆಯಲ್ಲಿ ಹಿಂದೂಪರ ಸಂಘಟನೆ ಆಕ್ರೋಶ ಹೊರಹಾಕಿದೆ. ಇದು ಇಬ್ರಾಹಿಂ ಕುಟುಂಬದ ವಿರುದ್ಧ ದಾಖಲಾಗಿರೋ 2ನೇ ಪ್ರಕರಣ ಎನ್ನಲಾಗ್ತಿದೆ. ಇಬ್ರಾಹಿಂ ಕುಟುಂಬಸ್ಥರ ವಿರುದ್ಧವಾಗಿ ತನಿಖೆ ನಡೆಸುವಂತೆ ಒತ್ತಡ ಹೆಚ್ಚಿದ್ದು, ಈ ಸಂಬಂಧ ಅಡೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

banner



[ad_2]

Source link

Leave a Reply

Your email address will not be published. Required fields are marked *