Advertisement

ಹಾವಿನಿಂದ 30 ಮಕ್ಕಳ ರಕ್ಷಸಿ ತಾನು ಪ್ರಾಣ ಬಿಟ್ಟ ನಾಯಿ!!

[ad_1]

ಈ ದಿನಾಯಿಗಳೆಂದರೆ ಹಲವು ಮೂಗುಮುರಿಯುವುದುಂಟು. ಅವುಗಳನ್ನು ಕಂಡಾಗ ಓಡಿಸುವುದು ಹೊಡೆಯುವುದು ಮಾಡುತ್ತಾರೆ. ಆದರೆ ಇಲ್ಲೊಂದೆಡೆ ಬೀದಿ ನಾಯಿ ಒಂದು ಹಾವಿನಿಂದ 30 ಮಕ್ಕಳ ಜೀವವನ್ನು ರಕ್ಷಿಸಿ ತಾನು ಪ್ರಾಣ ಬಿಟ್ಟಂತಹ ಅಮಾನುಷ ಘಟನೆ ಒಂದು ನಡೆದಿದೆ.

ಒಡಿಶಾದ ಧೀರಕುಲ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಎಂಬ ಕಾಳಿ ಹೆಸರಿನ ಬೀದಿನಾಯೊಂದು 30ಕ್ಕೂ ಹೆಚ್ಚು ಮಕ್ಕಳ ಜೀವವನ್ನು ರಕ್ಷಿಸಲು ಹಾವಿನೊಂದಿಗೆ ಕಾದಾಡಿದ್ದು, ಕೊನೆಗೆ ಹೋರಾಟದಲ್ಲಿ ಪ್ರಾಣ ಚೆಲ್ಲಿದೆ. ಈ ವಿಚಾರ ಗ್ರಾಮಸ್ಥರಿಗೆ ತಿಳಿಯುತ್ತಿದ್ದಂತೆ ಗ್ರಾಮಸ್ಥರು ನಾಯಿಯ ಸಾವಿನಿಂದ ತೀವ್ರ ಭಾವುಕರಾಗಿದ್ದು, ಶ್ವಾನಕ್ಕೆ ಭಾವುಕ ವಿದಾಯ ಏರ್ಪಡಿಸಿ ಅಂತಿಮ ಸಂಸ್ಕಾರ ನಡೆಸಿದ್ದಾರೆ.

ಸೋಮವಾರ ಬೆಳಗ್ಗೆ ಸುಮಾರು ಎಂಟೂವರೆ ಗಂಟೆಗೆ, ಹತ್ತಿರದ ಪ್ರಾಥಮಿಕ ಶಾಲೆಯಾದ ಶ್ರೀ ಜಗನ್ನಾಥ ಶಿಶು ವಿದ್ಯಾ ಮಂದಿರದ ಮೂವತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮ ಶಾಲಾ ಆವರಣದ ಹೊರಗೆ ಕುಳಿತಿದ್ದಾಗ, ವಿಷಪೂರಿತ ಹಾವೊಂದು ಅವರ ಕಡೆಗೆ ಚಲಿಸುತ್ತಿರುವುದು ಕಂಡುಬಂದಿದೆ. ಈ ವೇಳೆ ಕಾಳಿ ಯಾವುದೇ ಹಿಂಜರಿಕೆಯಿಲ್ಲದೆ ಹಾವನ್ನು ಓಡಿಸುವ ಪ್ರಯತ್ನ ಮಾಡಿದೆ. ಹಾವನ್ನು ಓಡಿಸಿ ನಾಯಿ ಕೊಂದು ಹಾಕಿದೆ. ಆದರೆ ಈ ಕಾಳಗದ ವೇಳೆ ಹಾವು ಕೂಡ ನಾಯಿಗೆ ಕಚ್ಚಿದ್ದು, ಪರಿಣಾಮವಾಗಿ ನಾಯಿಯೂ ಸತ್ತು ಹೋಗಿದೆ. ಇದೀಗ ನಾಯಿಯ ಸಾವಿನ ಸುದ್ದಿಯನ್ನು ತಿಳಿದು ಗ್ರಾಮಸ್ಥರೆಲ್ಲರೂ ಭಾವುಕರಾಗಿದ್ದಾರೆ.



[ad_2]

Source link

Leave a Reply

Your email address will not be published. Required fields are marked *