[ad_1]
3
ಬಂಟ್ವಾಳ, ಎಪ್ರಿಲ್ 28: ನೂತನ ಮನೆಯ ಗೃಹ ಪ್ರವೇಶದ ಔತಣಕೂಟಕ್ಕೆ ಸಿದ್ಧತೆ ನಡೆಸುತ್ತಿದ್ದಾಗಲೇ ಮನೆ ಯಜಮಾನ, ಯುವ ಮುಸ್ಲಿಂ ವಿಧ್ವಾಂಸ ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ಸಜಿಪ ಮುನ್ನೂರು ಗ್ರಾಮದ ಆಲಾಡಿ-ಕೊಪ್ಪಳ ಎಂಬಲ್ಲಿ ಸೋಮವಾರ ನಡೆದಿರುವ ಕುರಿತು ವರದಿಯಾಗಿದೆ.


ಸಜಿಪನಡು ನಿವಾಸಿ ಪುತ್ತನಾಕ ಎಂಬುವವರ ಪುತ್ರ ಅಮೀರ್ ಆರ್ಶದಿ (36) ಹೃದಯಾಘಾತಕ್ಕೀಡಾದ ವ್ಯಕ್ತಿ. ಇವರು ತಂದೆ ತಾಯಿ, ಪತ್ನಿ ಪುತ್ರ ಪುತ್ರಿಯನ್ನು ಅಗಲಿದ್ದಾರೆ.
ಇವರು ಇತ್ತೀಚೆಗಷ್ಟೇ ಕಿಡ್ನಿ ಸಂಬಂಧಿ ಕಾಯಿಲೆ ಕಾಣಿಸಿಕೊಂಡ ಕಾರಣ ಚಿಕಿತ್ಸೆ ಪಡೆಯುತ್ತಿದ್ದರು. ಭಾನುವಾರ ಮಧ್ಯರಾತ್ರಿ ಹಠಾತ್ ಎದೆನೋವು ಕಾಣಿಸಿದ್ದು, ಕೂಡಲೇ ಅವರನ್ನು ಬಿ.ಸಿ.ರೋಡ್ ಪರ್ಲಿಯಾದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ, ಅಲ್ಲಿನ ವೈದ್ಯರ ಸಲಹೆಯ ಮೇರೆಗೆ ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅದಾಗಲೇ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಎ.17 ರಂದು ಸಜಿಪಮುನ್ನೂರು ಗ್ರಾಮದ ಆಲಂಪಾಡಿ-ಕೊಪ್ಪಳ ಎಂಬಲ್ಲಿ ನೂತನ ಮನೆ ನಿರ್ಮಾಣ ಮಾಡಿದ್ದು, ಇದರು ಔಪಚಾರಿಕ ಗೃಹ ಪ್ರವೇಶ ಪ್ರಕ್ರಿಯೆ ನಡೆಸಿದ್ದರು. ಏ.27 ರಂದು ಮಧ್ಯಾಹ್ನ ಬಂಧು ಮಿತ್ರರಿಗೆ ಔತಣಕೂಟ ಏರ್ಪಡಿಸಿದ್ದರು. ಈ ಔತಣಕೂಟಕ್ಕಾಗಿ ಭಾನುವಾರ ರಾತ್ರಿವರೆಗೂ ಬಂಧು ಮಿತ್ರಿಗೆ ಕರೆ ಮಾಡಿ ಆಹ್ವಾನ ನೀಡಲಾಗಿತ್ತು ಅಮೀರ್ ಅರ್ಶದಿ ಅವರ ಹಠಾತ್ ನಿಧನಕ್ಕೆ ಬಂಧು ಮಿತ್ರರು ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ.
[ad_2]
Source link


















Leave a Reply