Advertisement

ವಾಣಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿ ಪ್ರಾಪ್ತಿ ಎಂ. ಗೌಡಗೆ ಸನ್ಮಾನ

[ad_1]

ಬೆಳ್ತಂಗಡಿ: 2025-26ನೇ ಸಾಲಿನ SSLC ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ 6ನೇ ಸ್ಥಾನ ಪಡೆಯುವ ಮೂಲಕ ವಾಣಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿ ಕು। ಪ್ರಾಪ್ತಿ ಎಂ. ಗೌಡ ಅಭೂತಪೂರ್ವ ಸಾಧನೆ ಮಾಡಿದ್ದು, ಈ ಹಿನ್ನೆಲೆಯಲ್ಲಿ ಅವರನ್ನು ‘ಪ್ರಗತಿ ಸ್ವ-ಸಹಾಯ ಸಂಘ’ದ ವತಿಯಿಂದ ಗೌರವಿಸಲಾಯಿತು.

ಕುವೆಟ್ಟು ಗ್ರಾಮದ ಶಕ್ತಿನಗರ ನಿವಾಸಿಯಾಗಿರುವ ಪ್ರಾಪ್ತಿ, ಪ್ರಗತಿ ಸ್ವ-ಸಹಾಯ ಸಂಘದ ಸದಸ್ಯರಾದ ಮಿನಾಕ್ಷಿ ಮತ್ತು ಮಹಾಬಲ ಗೌಡ ದಂಪತಿಯ ಸುಪುತ್ರಿ. ಕೇವಲ ರಾಜ್ಯ ಮಟ್ಟದಲ್ಲಿ ಮಾತ್ರವಲ್ಲದೆ, ಜಿಲ್ಲಾ ಮಟ್ಟದಲ್ಲಿ 4ನೇ ಸ್ಥಾನ, ತಾಲೂಕು ಮಟ್ಟದಲ್ಲಿ 2ನೇ ಸ್ಥಾನ ಹಾಗೂ ವಾಣಿ ಶಿಕ್ಷಣ ಸಂಸ್ಥೆಗೆ ಪ್ರಥಮ ಸ್ಥಾನವನ್ನು ಅಲಂಕರಿಸುವ ಮೂಲಕ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಶಾಲೆಗೆ ಮತ್ತು ಗ್ರಾಮಕ್ಕೆ ಕೀರ್ತಿ ತಂದಿದ್ದಾರೆ.ಅಭಿನಂದನಾ ಸಮಾರಂಭದಲ್ಲಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ನಿಕಟಪೂರ್ವ ಅಧ್ಯಕ್ಷರಾದ ಸೋಮೇಗೌಡ, ವಾಣಿ ಸೌಹಾರ್ಧ ಕೋ-ಆಪರೇಟಿವ್ ಸೊಸೈಟಿಯ ಸದಸ್ಯರಾದ ಉಷಾದೇವಿ ಕಿನ್ಯಾಜೆ ಮತ್ತು ಸುರೇಶ್ ಕೌಡಂಗೆ ಭಾಗವಹಿಸಿದ್ದರು.

ಪ್ರಗತಿ ಸ್ವ-ಸಹಾಯ ಸಂಘದ ಅಧ್ಯಕ್ಷ ಮೋಹನ ಗೌಡ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಂಘದ ಸದಸ್ಯರಾದ ಸೀತಾರಾಮ ಗೌಡ ಬೆಳಾಲು, ಮಹೇಶ್ ಗೌಡ ಬೆಳಾಲು, ಚಿತ್ರಾ ಮಹೇಶ್ ಗೌಡ, ಚಿದಾನಂದ ಗೌಡ ಬೆಳಾಲು, ಗೋಪಾಲ ಬೆಳಾಲು, ನಿತಿನ್ ಕಲ್ಮಂಜ, ಕುಸುಮ ಉಜಿರೆ, ಚಿದಾನಂದ ಬೆಳ್ತಂಗಡಿ ಹಾಗೂ ಬೆಳಿಯಪ್ಪ ಗೌಡ ಉಪಸ್ಥಿತರಿದ್ದು ಹರಸಿದರು.ವಾಣಿ ಸೌಹಾರ್ಧ ಕೋ-ಆಪರೇಟಿವ್‌ ಸೊಸೈಟಿಯ ಸಿ.ಇ.ಒ ಧನಂಜಯ್ ಕುಮಾರ್, ಸೋಮಂತಡ್ಕ ಶಾಖಾ ವ್ಯವಸ್ಥಾಪಕ ಉಮೇಶ್ ಮೈರ್ನೋಡಿ, ವಾಣಿ ಪಿಯು ಕಾಲೇಜಿನ ನಿವೃತ್ತ ಪ್ರಾಂಶುಪಾಲ ಯದುಪತಿ ಗೌಡ, ಪ್ರೌಢಶಾಲಾ ಮುಖ್ಯೋಪಾಧ್ಯಾಯ ಲಕ್ಷ್ಮೀನಾರಾಯಣ ಕೆ., ಮತ್ತು ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಸುಹಾಸಿನಿ ಧನಂಜಯ್ ಗೌಡ ಅವರು ಸಾಧಕ ವಿದ್ಯಾರ್ಥಿನಿಯ ಶ್ರಮವನ್ನು ಕೊಂಡಾಡಿ ಮುಂದಿನ ಭವಿಷ್ಯಕ್ಕೆ ಶುಭಹಾರೈಸಿದರು.



[ad_2]

Source link

Leave a Reply

Your email address will not be published. Required fields are marked *