Advertisement

ವಿಶ್ವ ಕಾರ್ಮಿಕ ದಿನಾಚರಣೆ ಮತ್ತು ಮಾಹಿತಿ ಶಿಬಿರ

[ad_1]

ಸಂತ ಸೆಬಾಸ್ಟಿಯನ್ ಚರ್ಚ್ ಗರ್ಡಾಡಿ ಮತ್ತು “ಸ್ಪಂದನ” ದಕ್ಷಿಣ ಕನ್ನಡ ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ (ರಿ) ಬೆಳ್ತಂಗಡಿ ಇದರ ಜಂಟಿ ಆಶ್ರಯದಲ್ಲಿ ಕಾರ್ಮಿಕ ಇಲಾಖೆಯ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಹಾಗೂ ಆಸಂಘಟಿತ ಕಾರ್ಮಿಕ ವರ್ಗದ ಕಾರ್ಮಿಕ ಕಲ್ಯಾಣ ಯೋಜನೆಗಳ ಮಾಹಿತಿ ಶಿಬಿರ ಹಾಗೂ ವಿಶ್ವ ಕಾರ್ಮಿಕ ದಿನ ಆಚರಣೆ.

ಮೇ 3, ಗರ್ಡಾಡಿ ಚರ್ಚಿನ ಕಾರ್ಮಿಕರ ನಿಯೋಗ ವತಿಯಿಂದ ಕಾರ್ಮಿಕರ ದಿನವನ್ನು ಆಚರಿಸಲಾಯಿತು. ಬೆಳಗ್ಗಿನ ದಿವ್ಯ ಬಲಿಪೂಜೆಯಲ್ಲಿ ಚರ್ಚಿನ ಎಲ್ಲಾ ಕಾರ್ಮಿಕರಿಗೆ ಶುಭವನ್ನು ಹಾರೈಸಿ ಪ್ರಾರ್ಥಿಸಲಾಯಿತು.

ನಂತರ ಹಮ್ಮಿಕೊಂಡ ಸಭಾ ಕಾರ್ಯಕ್ರಮದಲ್ಲಿ ಚರ್ಚಿನ ಧರ್ಮಗುರುಗಳಾದ ವ | ಪಾ I ಸುದೀಪ್ ಸಂತಾನ್ ಗೊನ್ಸಾಲ್ವಿಸ್ ರವರು ಅಧ್ಯಕ್ಷ ಸ್ಥಾನವನ್ನು ವಹಿಸಿ, ಚರ್ಚಿನ ಕಾರ್ಮಿಕರನ್ನು ಪ್ರಶಂಸಿಸಿ, ಶುಭವನ್ನು ಹಾರೈಸಿದರು. ಚರ್ಚಿನ ಪಾಲನಾ ಸಮಿತಿಯ ಉಪಾಧ್ಯಕ್ಷರಾದ ಶ್ರೀ ಸ್ಟೀವನ್ ಮೋನಿಸ್ ರವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.

ಕಾರ್ಮಿಕರಿಗೆ ಮಾಹಿತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸಂಪನ್ಮೂಲ ವ್ಯಕ್ತಿಯವರಾದ ಶ್ರೀ ವಸಂತ ನಡ, ಜಿಲ್ಲಾ ಅಧ್ಯಕ್ಷರು “ಸ್ಪಂದನ” ಕಾರ್ಮಿಕರ ಸಂಘ (ರಿ) ಬೆಳ್ತಂಗಡಿ. ಇವರು ಕಾರ್ಮಿಕರನ್ನು ಉದ್ದೇಶಿಸಿ “ರೈತರು ಈ ದೇಶದ ಬೆನ್ನೆಲುಬು, ಕಾರ್ಮಿಕರು ರೈತರ ಬೆನ್ನೆಲುಬು, ಎಂಬುವುದನ್ನು ಮರೆಯಬಾರದು.” ಇವರು ಕಾರ್ಮಿಕರಿಗೆ ಸಿಗುವ ಸವಲತ್ತುಗಳ ಕುರಿತು ಸವಿಸ್ತಾರ ಮಾಹಿತಿ ನೀಡಿದರು. ಸಂತ ಸೆಬಾಸ್ಟಿಯನ್ ಚರ್ಚಿನಲ್ಲಿ ವಿಶೇಷವಾಗಿ ಸಂತೋಷ ಗೊಳ್ಳಬೇಕು ಯಾಕೆಂದರೆ ಚರ್ಚಿನಲ್ಲಿ ಅದರಲ್ಲಿ ಕೂಡ ಕ್ಯಾಥೋಲಿಕ್ ಕೊಂಕಣಿ ಚರ್ಚಿನಲ್ಲಿ ಈ ರೀತಿಯ ಕಾರ್ಯಕ್ರಮ ಸಂಘಟಿಸಿರುವುದು . ಇಲ್ಲಿಯ ನಮ್ಮ ವಂದನಿಯ ಧರ್ಮ ಗುರುಗಳ ಪ್ರೇರಣೆಯಿಂದ ಮಾತ್ರ ಸಾಧ್ಯ ಎಂದು ಹೇಳುತ್ತೇನೆ. ಇದು ಖಂಡಿತವಾಗಿಯು ಮುಂದಿನ ದಿನಗಳಲ್ಲಿ ಈ ಚರ್ಚ್ ಬೇರೆ ಚರ್ಚ್ ಗಳಿಗೆ ದಾರಿ ದೀಪವಾಗಲಿ. ಈ ಮೂಲಕ ಇನ್ನಷ್ಟು ದುಡಿಯುವ ವರ್ಗದ ಕಾರ್ಮಿಕರಿಗೆ ಮಾಹಿತಿ ಕೊಡುವಂತಹ, ಸೌಲಭ್ಯ ಕೊಡುವಂತಹ ದೀಪವಾಗಲಿ. ದೀಪ ಬೆಳಗುವ ಜ್ವಾಲೆಯಾಗಲಿ ಎಂದು ಅವರ ಮನದಾಳದ ಮಾತನ್ನು ಹೇಳಿದರು. ಇವರನ್ನು ಚರ್ಚಿನ ಪರವಾಗಿ ಸನ್ಮಾನಿಸಲಾಯಿತು.

banner

ವೇದಿಕೆಯಲ್ಲಿ ಪಾಲನಾ ಸಮಿತಿಯ ಕಾರ್ಯದರ್ಶಿ ಶ್ರೀಮತಿ ಪ್ಲಾವಿಯಾ ಮೋರಾಸ್, ಕಾರ್ಮಿಕರ ಅಯೋಗದ ಸಂಚಾಲಕರಾದ ಶ್ರೀ ತೋಮಸ್ ಪಿರೇರಾ ಉಪಸ್ಥಿತರಿದ್ದರು.

ಎಲ್ಲಾ ಆಯೋಗದ ಸಂಯೋಜಕಿಯವರಾದ ಶ್ರೀಮತಿ ಮೇಬಲ್ ಕ್ರಾಸ್ತರವರು ಕಾರ್ಯಕ್ರಮವನ್ನು ನಿರೂಪಿಸಿದರು.
ಎಲ್ಲಾ ಗಣ್ಯರನ್ನು ಶ್ರೀ ಆಲ್ವಿನ್ ಮೋನಿಸ್ ಕ.ಸ. ಅಧ್ಯಕ್ಷ ಇವರು ಸ್ವಾಗತಿಸಿದರು. ಶ್ರೀ ಡೊಲ್ಫಿ ಮೋನಿಸ್ ಧನ್ಯವಾದ ನೀಡಿದರು.



[ad_2]

Source link

Leave a Reply

Your email address will not be published. Required fields are marked *