[ad_1]
1
ತನಗೆ ಹೇಳದೆ ಬೈಕ್ ತೆಗೆದುಕೊಂಡು ಹೋಗಿದ್ದಾನೆ ಎಂದು ಆಕ್ರೋಶದಲ್ಲಿ ತಂದೆ ಸ್ವಂತ ಮಗನಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಚನೆ ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ಪ್ರಗತಿಪುರದಲ್ಲಿ ನಡೆದಿದೆ.


45 ವರ್ಷದ ಆನಂದ್ ದೊಡ್ಡಮನಿ ಗಾರೆ ಕೆಲಸ ಮಾಡುತ್ತಿದ್ದರೆ, 19 ವರ್ಷದ ಮಗ ಮಲ್ಲಿಕಾರ್ಜುನ ಟೈಲ್ಸ್ ಕೆಲಸ ಮಾಡುತ್ತಿದ್ದ. ಮೇ 1 ರಂದು ಕಾರ್ಮಿಕರ ದಿನವಾಗಿದ್ದ ಕಾರಣ ಕೆಲಸಕ್ಕೆ ರಜೆ ಇತ್ತು. ರಜೆ ಇದ್ದ ಕಾರಣ ತಂದೆಯ ಬೈಕ್ ತೆಗೆದುಕೊಂಡು ಮಲ್ಲಿಕಾರ್ಜುನ್ ತೆರಳಿದ್ದಾನೆ. ಆದರೆ ಬೈಕ್ ತೆಗೆದುಕೊಳ್ಳುವಾಗ ಒಂದು ಮಾತು ತನಗೆ ಹೇಳಲಿಲ್ಲ ಎಂದು ಸಿಟ್ಟಾದ ಅಪ್ಪ ಸಂಜೆ ಮಗ ಮನೆಗೆ ಬಂದಾಗ ಪ್ರಶ್ನೆ ಮಾಡಿದ್ದಾನೆ. ಹೀಗೆ ಮಾತಿಗೆ ಮಾತು ಬೆಳೆದಿದೆ. ಕೊನೆಗೆ ಸಿಟ್ಟಿಗೆರಿದ ಅಪ್ಪ ಅಲ್ಲೇ ಇದ್ದ ಪೆಟ್ರೋಲ್ ತೆಗೆದುಕೊಂಡು ಮಗನ ಮೇಲೆ ಸುರಿದು ಬೆಂಕಿ ಹಚ್ಚಿದ್ದಾನೆ.
ಮಗನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಬೆನ್ನಲ್ಲೇ ಹೊತ್ತಿಕೊಂಡಿದೆ. ಇತ್ತ ಸೌದೆಗೂ ಬೆಂಕಿ ತಗುಲಿದೆ. ಮಗ ಮಲ್ಲಿಕಾರ್ಜುನ ಚೀರಾಡುತ್ತಿದ್ದರೆ, ಇತ್ತ ಆನಂದ್ ದೊಡ್ಡಮನಿಗೂ ಬೆಂಕಿ ತಗುಲಿದೆ. ಇಬ್ಬರ ಚೀರಾಟ ಶುರುವಾಗಿದೆ. ಸ್ಥಳೀಯರ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಬಳಿಕ ತಕ್ಷಣವೇ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಶೇಕಡಾ 40 ರಷ್ಟು ಸುಟ್ಟ ಗಾಯಗಳಿಂದ ಮಲ್ಲಿಕಾರ್ಜುನ್ ಬಳಲುತ್ತಿದ್ದರೆ, ತಂದೆ ಆನಂದ್ ದೊಡ್ಡಮನಿ ಶೇಕಡಾ 18ರಷ್ಟು ಸುಟ್ಟ ಗಾಯಗಳಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ.
[ad_2]
Source link

















Leave a Reply