Advertisement

ತಮಿಳುನಾಡು ಚುನಾವಣೆಯಲ್ಲಿ ಕರ್ನಾಟಕಕದ ವ್ಯಕ್ತಿಗೆ ಭರ್ಜರಿ ಗೆಲುವು!!

[ad_1]

ತಮಿಳುನಾಡಿನ ವಿಧಾನಸಭಾ ಚುನಾವಣೆಯಲ್ಲಿ ವಿಜಯ್ ನೇತೃತ್ವ ಟಿ ವಿ ಕೆ ಪಕ್ಷ ಭರ್ಜರಿ ಜಯಭೇರಿ ಬಾರಿಸಿದೆ. ಈ ಚುನಾವಣೆಯಲ್ಲಿ ಕರ್ನಾಟಕದ ತುಮಕೂರು ಜಿಲ್ಲೆಯ ತುರುವೇಕೆರೆಯ ವ್ಯಕ್ತಿಯೊಬ್ಬರು ಟಿವಿಕೆಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ ಎಂಬುದು ಗಮನಾರ್ಹ ಸಂಗತಿ.

ಸುನೀಲ್‌ ಆನಂದ್‌ ಎಂಬುವವರು ತಮಿಳುನಾಡಿನಲ್ಲಿ ಟಿವಿಯ ಪಕ್ಷದಿಂದ ಸ್ಪರ್ಧಿಸಿ 75,664 ಮತ ಪಡೆದಿದ್ದಾರೆ. ಇವರು ಡಿಎಂಕೆ ಹಾಗೂ ಎಐಎಡಿಎಂಕೆ ಎರಡೂ ಪಕ್ಷದವರನ್ನು ಮಣಿಸಿ, 7778 ಮತಗಳ ಅಂತರದಿಂದ ಮೆಟ್ಟುಪಾಳ್ಯಂನಲ್ಲಿ ವಿಜಯ ಸಾಧಿಸಿದ್ದಾರೆ.

ಮೂಲತಃ ತುರುವೇಕೆರೆಯವರಾದ ಸುನಿಲ್, ತಮಿಳುನಾಡಿನ ಮೆಟ್ಟುಪಾಳ್ಯಂನಲ್ಲಿ ನೆಲೆಸಿದ್ದಾರೆ. ಸುನೀಲ್ ಅವರ ಅಜ್ಜನ ಊರು ತಾಲೂಕಿನ ದಬ್ಬೇಘಟ್ಟ ಹೋಬಳಿಯ ಹೊಡಿಕೇಘಟ್ಟ. ಹಲವು ದಶಕಗಳ ಹಿಂದೆ ನಿಂಗೇಗೌಡರು ತಮಿಳುನಾಡಿಗೆ ವಲಸೆ ಹೋಗಿದ್ದರು. ತದ ನಂತರದ ದಿನಗಳಲ್ಲಿ ಅಲ್ಲೇ ತಮ್ಮ ಜೀವನ ಸಾಗಿಸಿದರು. ನಿಂಗೇಗೌಡರ ಮಗ ಎಚ್.ಎನ್.ನಾಗರಾಜು ಅವರ ಮಗನೇ ಈಗ ಮೆಟ್ಟುಪಾಳ್ಯಂನ ಶಾಸಕರಾಗಿರುವ ಸುನಿಲ್ ಆನಂದ್.

10ನೇ ತರಗತಿಯವರೆಗೆ ಓದು ಪೂರೈಸಿದ್ದು, ತಮಿಳುನಾಡಿನಲ್ಲಿಯೇ ರಿಯಲ್‌ ಎಸ್ಟೇಟ್‌ ಹಾಗೂ ಇತರ ಉದ್ಯಮದಲ್ಲಿ ತೊಡಗಿಕೊಂಡಿದ್ದಾರೆ. ತುಂಬಾ ಸಮಯದಿಂದ ನಟ ವಿಜಯ್‌ ಗೆ ಇವರು ಬೆಂಬಲಿಗರಾಗಿದ್ದಾರೆ. ಜೊತೆಗೆ, ಟಿವಿಕೆಯ ನಿಷ್ಠಾವಂತ ಕಾರ್ಯಕರ್ತ ಕೂಡಾ ಆಗಿದ್ದಾರೆ. 

The post ತಮಿಳುನಾಡು ಚುನಾವಣೆಯಲ್ಲಿ ಕರ್ನಾಟಕಕದ ವ್ಯಕ್ತಿಗೆ ಭರ್ಜರಿ ಗೆಲುವು!! appeared first on Hosakananda.

[ad_2]

Source link

Leave a Reply

Your email address will not be published. Required fields are marked *