Advertisement

ನೂತನವಾಗಿ ಆಯ್ಕೆಯಾದ ಶಾಸಕಿಯನ್ನು ತಬ್ಬಿಕೊಳ್ಳಲು ಮುಂದಾದ ಕಾಂಗ್ರೆಸ್‌ ನಾಯಕ

[ad_1]

ತಿರುವನಂತಪುರಂ: ಕೇರಳ ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ) ಪ್ರಧಾನ ಕಚೇರಿಯಲ್ಲಿ ನಡೆದ ಘಟನೆಯೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಭಾರೀ ಚರ್ಚೆ ನಡೆಯುತ್ತಿದೆ.

ನೂತನವಾಗಿ ಆಯ್ಕೆಯಾಗಿರುವ ಕೊಲ್ಲಂ ಶಾಸಕಿ ಬಿಂದು ಕೃಷ್ಣ ಅವರಿಗೆ ಹಿರಿಯ ಕಾಂಗ್ರೆಸ್‌ ನಾಯಕ ಚೇರಿಯನ್‌ ಫಿಲಿಪ್‌ ಅವರು ಸಾರ್ವಜನಿಕವಾಗಿ ತಬ್ಬಿಕೊಳ್ಳಲು ಯತ್ನ ಮಾಡಿರುವ ಘಟನೆ ನಡೆದಿದೆ. ಶಾಸಕರಿ ನಿರಾಕರಣೆ ಮಾಡಿದ್ದು, ಆದರೂ ಕಾಂಗ್ರೆಸ್‌ ನಾಯಕ ಚೇರಿಯನ್‌ ಫಿಲಿಪ್‌ ಮಾತ್ರ ಬಲವಂತವಾಗಿ ತಬ್ಬಿಕೊಳ್ಳಲು ಯತ್ನ ಮಾಡಿರುವುದು ಪಕ್ಷದ ಮುಜುಗರಕ್ಕೆ ಕಾರಣವಾಗಿದೆ.

ಓರ್ವ ಶಾಸಕಿಗೆ ಈ ರೀತಿಯ ಪರಿಸ್ಥಿತಿಯಾದರೆ, ಸಾಮಾನ್ಯ ಮಹಿಳೆಯರ ಗತಿಯೇನು? ಇದೊಂದು ನಾಚಿಕೆಗೇಡಿನ ಸಂಗತಿ ಎಂದು ಬಳಕೆದಾರರು ಕಿಡಿಕಾರಿದ್ದಾರೆ.



[ad_2]

Source link

Leave a Reply

Your email address will not be published. Required fields are marked *