Advertisement

ಧರ್ಮಸ್ಥಳ ದೇವಾಲಯಕ್ಕೆ ಕಾಲಿಟ್ಟ ಶೃಂಗೇರಿ ಮರು ಎಣಿಕೆಯ ಆಣೆ -ಪ್ರಮಾಣ !!

[ad_1]

ಶೃಂಗೇರಿ ಕ್ಷೇತ್ರದ ಅಂಚೆ ಮತ ಮರು ಎಣಿಕೆ ಬಳಿಕ ಶಾರದಾಂಬೆ ನೆಲದಲ್ಲಿ ಆಣೆ-ಪ್ರಮಾಣದ ರಾಜಕೀಯ ಜೋರಾಗಿದೆ. ಇದೀಗ ಈ ಆಣೆ ಪ್ರಮಾಣ ಧರ್ಮಸ್ಥಳಕ್ಕೂ ಕಲಿಟ್ಟಿದೆ.

ಅಂಚೆ ಮತದಾನ ಮರು ಎಣಿಕೆ ಫಲಿತಾಂಶ ಹೊರಬಂದ ಬಳಿಕ ಬಹಳ ಬಿಜೆಪಿ (BJP) ಕಾರ್ಯಕರ್ತರು, ನಮ್ಮ ಅಂದೇ ಗೆಲುವು ಸಾಧಿಸಿತ್ತು. ಆದರೆ, ಬಿಜೆಪಿ ಏಜೆಂಟ್‌ಗಳಾಗಿದ್ದ ರಾಮಸ್ವಾಮಿ ಶೆಟ್ಟಿಗದ್ದೆ ಹಾಗೂ ಸತೀಶ್ ಅದ್ದಡ ಕಾಂಗ್ರೆಸ್ ಗೆಲುವಿಗೆ ಶ್ರಮಿಸಿ ಬಿಜೆಪಿಗೆ ಮೋಸ ಮಾಡಿದ್ದರು ಎಂದು ಆರೋಪಿಸಿದ್ದಾರೆ. ಹೀಗಾಗಿ ಪಕ್ಷ ನಿಷ್ಠೆ ಸಾಬೀತುಪಡಿಸಿಕೊಳ್ಳಲು ಒಂದು ಹೆಜ್ಜೆ ಮುಂದೆ ಹೋಗಿರೋ ರಾಮಸ್ವಾಮಿ ಹಾಗೂ ಸತೀಶ್ ಧರ್ಮಸ್ಥಳದ ಮಂಜುನಾಥ ಸ್ವಾಮಿ ದೇಗುಲಕ್ಕೂ ಭೇಟಿ ನೀಡಿ ಆಣೆ ಪ್ರಮಾಣ ಮಾಡಿದ್ದಾರೆ.

ಟಿ.ಡಿ ರಾಜೇಗೌಡ 2023ರಲ್ಲಿ 201 ಮತಗಳ ಅಂತರದಿಂದ ಗೆದ್ದಿದ್ದರು. ಆದರೆ 2026ರ ಅಂಚೆ ಮತಗಳ ಮರು ಎಣಿಕೆ ಸಂದರ್ಭದಲ್ಲಿ 52 ಮತಗಳ ಅಂತರದಿಂದ ಸೋತಿದ್ದಾರೆ. 2023ರಲ್ಲಿ ಮಾನ್ಯವಾಗಿದ್ದ 255 ಮತ, 2026ರಲ್ಲಿ ಅಮಾನ್ಯವಾಗಲು ಹೇಗೆ ಸಾಧ್ಯ? ಕಾಂಗ್ರೆಸ್​-ಬಿಜೆಪಿ ಯಾರೇ ಮತಚೋರಿ ಮಾಡಿದರೂ ಅವರಿಗೆ ಶಿಕ್ಷೆ ಆಗಲಿ ಅಂತ ಪ್ರಾರ್ಥನೆ ಸಲ್ಲಿಸಿದ್ದಾರೆ. ಈ ಮಧ್ಯೆ ಬಿಜೆಪಿ ಏಜೆಂಟ್‌ಗಳ ಈ ಆಣೆ-ಪ್ರಮಾಣ ಕ್ಷೇತ್ರದಾದ್ಯಂತ ತೀವ್ರ ಸಂಚಲನ ಸೃಷ್ಟಿಸಿದೆ.

The post ಧರ್ಮಸ್ಥಳ ದೇವಾಲಯಕ್ಕೆ ಕಾಲಿಟ್ಟ ಶೃಂಗೇರಿ ಮರು ಎಣಿಕೆಯ ಆಣೆ -ಪ್ರಮಾಣ !! appeared first on Hosakananda.

[ad_2]

Source link

Leave a Reply

Your email address will not be published. Required fields are marked *