Advertisement

ಉತ್ತರಪ್ರದೇಶದಲ್ಲಿ ಮಳೆ ಅವಾಂತರ; 104ಕ್ಕೇರಿದ ಸಾವಿನ ಸಂಖ್ಯೆ – ಪ್ರಯಾಗ್‌ರಾಜ್‌ನಲ್ಲೇ ಅತ್ಯಧಿಕ 21 ಜನ ಬಲಿ

[ad_1]

uttar pradesh rain

ಲಕ್ನೋ: ಉತ್ತರ ಪ್ರದೇಶದಾದ್ಯಂತ (Uttar Pradesh Rain) ಭಾರೀ ಮಳೆ ಮತ್ತು ಬಿರುಗಾಳಿಗೆ ಈವರೆಗೆ 104 ಜನರು ಸಾವನ್ನಪ್ಪಿದ್ದಾರೆ. ಪ್ರಯಾಗ್‌ರಾಜ್‌ನಲ್ಲೇ (Prayagraj) ಅತ್ಯಧಿಕ 21 ಜನ ಬಲಿಯಾಗಿದ್ದಾರೆ.

ಮಳೆ ಹೊಡೆತಕ್ಕೆ 53 ಜನರಿಗೆ ಗಾಯಗಳಾಗಿವೆ. 98 ಮನೆಗಳು ಹಾನಿಗೊಂಡಿವೆ. 130 ಜಾನುವಾರುಗಳು ಸಾವಿಗೀಡಾಗಿವೆ. ಮರಗಳು ಮತ್ತು ವಿದ್ಯುತ್ ಕಂಬಗಳು ಧರೆಗುರುಳಿವೆ. ರಾಜ್ಯಾದ್ಯಂತ ಹಲವಾರು ಮನೆಗಳು ಹಾನಿಗೊಳಗಾಗಿವೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸಾವಿಗೆ ಸಂತಾಪ ಸೂಚಿಸಿದ್ದು, 24 ಗಂಟೆಗಳ ಒಳಗೆ ಆರ್ಥಿಕ ನೆರವು ನೀಡಲು ಆದೇಶಿಸಿದ್ದಾರೆ. ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ – 54 ಮಂದಿ ಸಾವು

ಭದೋಹಿಯಲ್ಲಿ 18, ಮಿರ್ಜಾಪುರದಲ್ಲಿ 15, ಫತೇಪುರ್‌ನಲ್ಲಿ 10, ಉನ್ನಾವ್ ಮತ್ತು ಬದೌನ್‌ನಲ್ಲಿ ತಲಾ ಆರು, ಪ್ರತಾಪ್‌ಗಢ ಮತ್ತು ಬರೇಲಿಯಲ್ಲಿ ತಲಾ ನಾಲ್ಕು ಮತ್ತು ಸೀತಾಪುರ, ರಾಯ್‌ಬರೇಲಿ ಮತ್ತು ಚಂದೌಲಿಯಲ್ಲಿ ತಲಾ ಇಬ್ಬರು ಸಾವನ್ನಪ್ಪಿದ್ದಾರೆ. ಕಾನ್ಪುರ್ ದೇಹತ್, ಹರ್ದೋಯಿ ಮತ್ತು ಸಂಭಾಲ್‌ನಿಂದಲೂ ಎರಡು ಸಾವುಗಳು ವರದಿಯಾಗಿವೆ. ಕೌಶಂಬಿ, ಶಹಜಹಾನ್‌ಪುರ, ಸೋನ್‌ಭದ್ರ ಮತ್ತು ಲಖಿಂಪುರದಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ.

Uttar Pradesh Rain

ನಿನ್ನೆ ಸಂಜೆ ಹಠಾತ್ತನೆ ಹವಾಮಾನ ಬದಲಾಯಿತು. ಉತ್ತರ ಪ್ರದೇಶದ ದೊಡ್ಡ ಭಾಗಗಳಲ್ಲಿ ಧೂಳಿನ ಮೋಡಗಳು ಆವರಿಸಿದ್ದವು. ತೀವ್ರ ಬಿರುಗಾಳಿಯು ಹೋರ್ಡಿಂಗ್‌ಗಳು ಮತ್ತು ಟಿನ್ ಶೆಡ್‌ಗಳನ್ನು ನೆಲಸಮ ಮಾಡಿತು. ಮರಗಳು ಬುಡಮೇಲಾದ ಕಾರಣ ಅನೇಕರು ಮರಗಳು ಮತ್ತು ಫ್ಲೈಓವರ್‌ಗಳ ಕೆಳಗೆ ಆಶ್ರಯ ಪಡೆಯಬೇಕಾಯಿತು. ಹಲವಾರು ರಸ್ತೆಗಳು ಮುಚ್ಚಿಹೋಗಿದ್ದವು. ಮರಗಳು ಉರುಳಿಬಿದ್ದ ಕಾರಣ ವಾಹನಗಳು ಜಖಂಗೊಂಡವು. ಬಿರುಗಾಳಿಯಲ್ಲಿ ಅನೇಕ ಮನೆಗಳು ಸಹ ಹಾನಿಗೊಳಗಾದವು. ಸಿಲುಕಿಕೊಂಡಿದ್ದವರನ್ನು ರಕ್ಷಿಸಲು ರಕ್ಷಣಾ ಸಿಬ್ಬಂದಿ ತಮ್ಮ ಬರಿ ಕೈಗಳಿಂದಲೇ ಅವಶೇಷಗಳನ್ನು ತೆರವುಗೊಳಿಸಿದರು.

ಭದೋಹಿಯ ರಾಂಪುರದಲ್ಲಿ ಪಾಂಟೂನ್ ಸೇತುವೆ ಹಾನಿಗೊಳಗಾದ ನಂತರ ಹಲವಾರು ಜನರು ಗಂಗಾ ನದಿಗೆ ಬಿದ್ದಿರುವ ವರದಿಗಳಿವೆ. ಮತ್ತೊಂದು ಘಟನೆಯಲ್ಲಿ, ಮಿರ್ಜಾಪುರದ ಗೌರ ಪ್ರಮಾಣಪುರದಲ್ಲಿ ಪಾಂಟೂನ್ ಸೇತುವೆ ಹಾನಿಗೊಳಗಾಗಿದ್ದು, 20 ಹಳ್ಳಿಗಳಿಗೆ ಸಂಪರ್ಕ ಕಡಿತಗೊಂಡಿದೆ. ಫತೇಪುರದಲ್ಲಿ ಎಂಟು ಸಾವುಗಳು ಖಾಗಾ ತಹಸಿಲ್‌ನಲ್ಲಿ ಸಂಭವಿಸಿವೆ. ಇದರಲ್ಲಿ ಐವರು ಮಹಿಳೆಯರು ಸೇರಿದ್ದಾರೆ. ಇದಲ್ಲದೆ, ಸದರ್ ತಹಸಿಲ್‌ನಲ್ಲಿ ಗೋಡೆ ಕುಸಿದು ಒಬ್ಬ ಮಹಿಳೆ ಸಾವನ್ನಪ್ಪಿದ್ದಾರೆ ಎಂದು ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವಿನಾಶ್ ತ್ರಿಪಾಠಿ ತಿಳಿಸಿದ್ದಾರೆ. ಇದನ್ನೂ ಓದಿ: Delhi Horror | ಚಲಿಸುತ್ತಿದ್ದ ಬಸ್ಸಿನೊಳಗೆ ಮಹಿಳೆಯ ಮೇಲೆ ಗ್ಯಾಂಗ್ ರೇಪ್ – ಡ್ರೈವರ್, ಕಂಡಕ್ಟರ್ ಅರೆಸ್ಟ್

ಪ್ರತಾಪ್‌ಗಢದಲ್ಲಿ ಗೋಡೆ ಮತ್ತು ಶೆಡ್ ಕುಸಿದು ಸಿಡಿಲು ಬಡಿದು ಪ್ರತ್ಯೇಕ ಘಟನೆಗಳಲ್ಲಿ ನಾಲ್ವರು ಮೃತಪಟ್ಟಿದ್ದರೆ, ಕಾನ್ಪುರ ದೇಹತ್ ಜಿಲ್ಲೆಯಲ್ಲಿ ಮಳೆ ಸಂಬಂಧಿತ ಘಟನೆಗಳಲ್ಲಿ ಇಬ್ಬರು ಬಲಿಯಾಗಿದ್ದಾರೆ. ಡಿಯೋರಿಯಾದಲ್ಲಿ ಸಿಡಿಲು ಬಡಿದು ಇಬ್ಬರು ಸಾವನ್ನಪ್ಪಿದ ವರದಿಯಾಗಿದೆ.

[ad_2]

Source link publictv.in

Leave a Reply

Your email address will not be published. Required fields are marked *