Advertisement

ಪಶ್ಚಿಮ ಏಷ್ಯಾ ಬಿಕ್ಕಟ್ಟು ಪರಿಹಾರಕ್ಕೆ ಭಾರತವೇ ಸೂಕ್ತ: ರಷ್ಯಾ ವಿದೇಶಾಂಗ ಸಚಿವ

[ad_1]

Sergey Lavrov

ಮಾಸ್ಕೋ: ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷದಲ್ಲಿ ಭಾರತ ಸಮರ್ಥ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಬಹುದು. ಭಾರತಕ್ಕೆ ಅಂತಹ ವಿಶಾಲ ರಾಜತಾಂತ್ರಿಕ ಸಾಮರ್ಥ್ಯ ಇದೆ ಎಂದು ರಷ್ಯಾ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ (Sergey Lavrov) ದೆಹಲಿಯಲ್ಲಿ ಹೇಳಿದ್ದಾರೆ.

ಈ ಮಧ್ಯೆ, ಇರಾನ್ ವಿದೇಶಾಂಗ ಸಚಿವ ಅರಾಘ್ಚಿ ಕೂಡ ಹೊರ್ಮುಜ್ ಬಿಕ್ಕಟ್ಟು ಪರಿಹಾರಕ್ಕೆ ಭಾರತ ಪರಿಹಾರ ಒದಗಿಸಬಹುದು ಅಂತ ವಿದೇಶಾಂಗ ಸಚಿವ ಜೈಶಂಕರ್ ಜೊತೆಗಿನ ಮಾತುಕತೆ ವೇಳೆ ಹೇಳಿದ್ದಾರೆ. ಇದನ್ನೂ ಓದಿ: ಯುಎಇಯಲ್ಲಿ ಪ್ರಧಾನಿ ಮೋದಿ: ಎಲ್‌ಪಿಜಿ, ರಕ್ಷಣಾ, ತೈಲ ನಿಕ್ಷೇಪ ಒಪ್ಪಂದಗಳಿಗೆ ಭಾರತ ಸಹಿ

ತುರ್ತು ಸಮಸ್ಯೆಗಳನ್ನು ಪರಿಹರಿಸಲು ಅಮೆರಿಕ ಮತ್ತು ಇರಾನ್ ನಡುವೆ ಸಂವಾದಗಳನ್ನು ಸ್ಥಾಪಿಸಲು ಪಾಕಿಸ್ತಾನ ಸಹಾಯ ಮಾಡುತ್ತಿದೆ. ಇರಾನ್ ಮತ್ತು ಅದರ ಅರಬ್ ಸ್ನೇಹಿತರ ನಡುವೆ ದೀರ್ಘಾವಧಿಯ ಮಧ್ಯವರ್ತಿಯನ್ನು ಅವರು ಹುಡುಕಿದರೆ, ಭಾರತವು ತನ್ನ ಅಪಾರ ರಾಜತಾಂತ್ರಿಕ ಅನುಭವವನ್ನು ಪರಿಗಣಿಸಿ ಈ ಪಾತ್ರವನ್ನು ವಹಿಸಬಹುದು ಲಾವ್ರೋವ್ ತಿಳಿಸಿದ್ದಾರೆ.

ಇರಾನ್ ಸಂಘರ್ಷದ ಬಗ್ಗೆ ಜಾಗತಿಕ ಕಳವಳ, ರಷ್ಯಾ ಮತ್ತು ಇರಾನಿನ ತೈಲದ ಮೇಲಿನ ಅಮೆರಿಕದ ನಿರ್ಬಂಧಗಳ ವಿನಾಯಿತಿಗಳ ಸನ್ನಿಹಿತ ಮುಕ್ತಾಯದ ಬೆನ್ನಲ್ಲೇ ಲಾವ್ರೊವ್ ಅವರ ಹೇಳಿಕೆಗಳು ಹೊರಬಿದ್ದಿವೆ.

[ad_2]

Source link publictv.in

Leave a Reply

Your email address will not be published. Required fields are marked *