Advertisement

ವೀರಮಂಗಲ ಸಾರಕೂಟೇಲುವರಗೆ ಕೆ ಎಸ್ ಆರ್ ಟಿ ಸಿ ಬಸ್ ಬರಲು ಪುತ್ತೂರು ಶಾಸಕರಿಗೆ ಮನವಿ

[ad_1]

Puttur: ಪುತ್ತೂರು – ಶಾಂತಿಗೋಡು ಗ್ರಾಮದ ವೀರಮಂಗಲಕ್ಕೆ ಬರುವ ಬಸ್ ಸಾರಕೂಟೇಲಿನವರೆಗೆ ಬರುವಂತೆ ಸಾರಕೂಟೇಲು ಪರಿಸರದ ನೂರಾರು ಫಲಾನುಭವಿಗಳು ಮನವಿ ಮಾಡಿದರು. ಈಗಾಗಲೆ ವೀರಮಂಗಲಕ್ಕೆ ಬರುವ ಬಸ್ ಬೆಳಗ್ಗಿನ ಹೊತ್ತು 8.45 ಕ್ಕೆ ಸಾರಕೂಟೇಲಿನವರೆಗೆ ಬಂದು ತಿರುಗಿ ವೀರಮಂಗಲ ಕ್ಕೆ ಹೋದರೆ ನೂರಾರು ಮಕ್ಕಳಿಗೆ ಅನುಕೂಲವಾಗುತ್ತದೆ. ಅದೇ ರೀತಿ ಸಂಜೆ ವೀರಮಂಗಲದಿಂದ 4.30 ಕ್ಕೆ ಹೋಗುವ ಬಸ್ ಸಾರೆಕೂಟೆಲಿನಲ್ಲಿ ತಿರುಗಿ ಪುತ್ತೂರಿಗೆ ತೆರಳಿದಾಗ ಮಕ್ಕಳಿಗೆ ತುಂಬಾ ಅನುಕೂಲವಾಗುತ್ತದೆ ಎಂದು ಕಾವ್ಯ ಚಂದ್ರಶೇಖರ ಸಾರಕೂಟೇಲು, ಜಯಶ್ರೀ ಹರೀಶ್, ಪೂರ್ಣಿಮಾ ಜಯರಾಮ್ ಹಾಗೂ ಊರವರು 50ಕ್ಕೂ ಹೆಚ್ಚು ಜನ ಸೇರಿ ಮನವಿ ಮಾಡಿದರು.

ಮನವಿ ಸ್ವೀಕರಿಸಿದ ಶಾಸಕರು ಆ ತಕ್ಷಣವೇ ಡಿಪೋ ಮ್ಯಾನೇಜರ್ ಗೆ ವ್ಯವಸ್ಥೆ ಮಾಡಲು ತಿಳಿಸಿದರು. ಶಾಲಾ ಮುಖ್ಯಗುರು ತಾರಾನಾಥ ಪಿ ಊರ ಪ್ರಮುಖರಾದ ಬಾಬು ಶೆಟ್ಟಿ ನೂರಾರು ಫಲಾನುಭವಿಗಳು ಉಪಸ್ಥಿತರಿದ್ದರು.

ಬಸ್ ಸಾರಕೂಟೇಲಿಗೆ ಬಂದರೆ ನೂರಾರು ಮಕ್ಕಳಿಗೆ ಊರವರಿಗೆ ಅನುಕೂಲ
ಗ್ರಾಮೀಣ ಪ್ರದೇಶವಾದ ಶಾಂತಿಗೋಡು ಗ್ರಾಮದ ಸಾರಕೂಟೇಲು ಪುಡಿಂಕಲಡ್ಕ , ಕಾಯರ್ ಮುಗೇರು ಭಾಗದಿಂದ ನೂರಾರು ಮಕ್ಕಳು ಶಾಲೆಗೆ ಬರ್ತಾರೆ. 5 ಕಿ.ಮಿ ಗಿಂತ ಹೆಚ್ಚು ದೂರದಿಂದ ಶಾಲೆಗೆ ಬರುವುದು ಕಷ್ಟವಾಗಿದೆ.ಅಟೋ ಬಾಡಿಗೆ ಕಟ್ಟಲು ಕೂಲಿ ಮಾಡಿ ಬದುಕುವ ನಿವಾಸಿಗಳಿಗೆ ಕಷ್ಟವಾಗುತ್ತಿದೆ. ಬಹುತೇಕ ಪ.ಜಾ.ಪ.ಪಂ, ಮುಸ್ಲಿಂ,ಇತರ ವರ್ಗದ ಮಕ್ಕಳು ವಾಸವಾಗುತ್ತಿದ್ದಾರೆ. ಗುಣಮಟ್ಟದ ಶಿಕ್ಷಣ ಕೊಡುತ್ತಿರುವ ಊರಿನ ಏಕೈಕ ಶಾಲೆ ವೀರಮಂಗಲ ವಾಗಿದೆ. ಈ ವಾಸ್ತವವನ್ನು ಅರಿತ ಶಾಸಕರು ಊರ ಜನರಿಗೆ ಅನುಕೂಲ ಮಾಡಿಕೊಟ್ಟಿರುವುದು ಶ್ಲಾಘನಿಯವಾಗಿದೆ.



[ad_2]

Source link

Leave a Reply

Your email address will not be published. Required fields are marked *