[ad_1]
ದಾವಣಗೆರೆ: ದಕ್ಷಿಣ ಕ್ಷೇತ್ರದ ಅಖಾಡದಲ್ಲಿ ಸಾದಿಕ್ ಪೈಲ್ವಾನ್ ಅವರದ್ದೇ ಕಾಂಗ್ರೆಸ್ ಗೆ ದೊಡ್ಡ ತಲೆ ನೋವಾಗಿತ್ತು. ಮುಸ್ಲಿಮರಿಗೆ ಟಿಕೆಟ್ ಕೊಡದ ಹಿನ್ನೆಲೆ ಬಂಡಾಯವೆದ್ದಿದ್ದ ಸಾದಿಕ್ ಪೈಲ್ವಾನ್, ಸ್ವತಂತ್ರವಾಗಿಯೇ ಸ್ಪರ್ಧೆ ಮಾಡಲು ತೀರ್ಮಾನ ಮಾಡಿ, ನಾಮಪತ್ರ ಸಲ್ಲಿಕೆ ಮಾಡಿದ್ದರು. ಆರಂಭದಲ್ಲಿ ರಿಜ್ವಾನ್ ಅರ್ಷದ್ ಅವರು ಹೇಳಿದ ಮಾತಿಗೂ ಸೊಪ್ಪು ಹಾಕಿರಲಿಲ್ಲ. ಇದೋಗ ಸಿಎಂ ಮಾತಿಗೆ ಒಪ್ಪಿ ಸ್ಪರ್ಧೆ ಮಾಡದೆ ಇರಲು ತೀರ್ಮಾನಿಸಿದ್ದಾರೆ.
ಈ ಬೆನ್ನಲ್ಲೇ ಕಾಂಗ್ರೆಸ್ ನಾಯಕರು ಸಾದಿಕ್ ಪೈಲ್ವಾನ್ ಮನೆಗೆ ಭೇಟಿ ನೀಡಿದ್ದಾರೆ. ಇಂದು ಎಸ್ ಎಸ್ ಮಲ್ಲಿಕಾರ್ಜುನ, ಪ್ರದೀಪ್ ಈಶ್ವರ್, ರಿಜ್ವಾನ್ ಅರ್ಷದ್ ಸೇರಿದಂತೆ ಅನೇಕ ಕಾಂಗ್ರೆಸ್ ನಾಯಕರು ಸಾದಿಕ್ ಪೈಲ್ವಾನ್ ಅವರ ಮನೆಗೆ ಹೋಗಿ, ಮಾತನ್ನಾಡಿಕೊಂಡು ಬಂದಿದ್ದಾರೆ.
ಈ ಸಂಬಂಧ ಶಾಸಕ ರಿಜ್ವಾನ್ ಅರ್ಷದ್ ಮಾತನ್ನಾಡಿ, ಕಾಂಗ್ರೆಸ್ ಕಾರ್ಯಕರ್ತರೆಲ್ಲಾ ಅವರನ್ನ ಭೇಟಿ ಮಾಡಿದ್ದೇವೆ. ನಾನು ವಿತ್ ಡ್ರಾ ಮಾಡ್ತೇನೆ ಅಂತ ಹೇಳಿದ್ದಾರೆ. ಕೊನೆ ಸಮಯ ಮುಗಿದಿದೆ. ಆದರೂ ನಾವೆಲ್ಲಾ ಇಲ್ಲಿ ಕೂತು ಯಾವ ವಿಚಾರ ಏನಾಗಿದೆ ಅಂತ ಚರ್ಚೆ ಮಾಡಿದ್ದೇವೆ. ಸನ್ಮಾನ್ಯ ಮುಖ್ಯಮಂತ್ರಿಗಳು, ಡಿಸಿಎಂ ಡಿಕೆ ಶಿವಕುಮಾರ್ ಅವರು ಕೂಡ ಮಾತನ್ನಾಡಿದ್ದಾರೆ. ಆ ಬಳಿಕ ಅವರು ಒಂದು ಮಾತನ್ನ ಹೇಳಿದ್ದಾರೆ. ನಾನು ಕಟ್ಟಾ ಕಾಂಗ್ರೆಸ್ಸಿಗ. ನನ್ನ ಇಡೀ ಜೀವನವನ್ನ ಕಾಂಗ್ರೆಸ್ ಗೋಸ್ಕರ ಮುಡಿಪಾಗಿಟ್ಟಿದ್ದೇನೆ. ಶಾಮನೂರು ಶಿವಶಂಕರಪ್ಪ ಅವರ ಜೊತೆಗೆ, ಮಲ್ಲಿಕಾರ್ಜುನ್ ಅವರ ಜೊತೆಗೆ ಕೆಲಸ ಮಾಡಿದ್ದೇನೆ. ಯಾವತ್ತು ನಾನು ಪಕ್ಷ ಚೇಂಜ್ ಮಾಡಿರಲಿಲ್ಲ. ಆದರೆ ಒಂದಷ್ಟು ಘಟನೆಗಳಿಂದ ಬೇಸರ ಆಗಿ, ನಾಮಪತ್ರ ಸಲ್ಲಿಕೆ ಮಾಡಿದೆ ಎಂದಿದ್ದಾರೆ. ಅದರಿಂದ ವಾಪಾಸ್ ಬರ್ತಿರೋದಕ್ಕೆ ಕಾಂಗ್ರೆಸ್ ಪಕ್ಷದಿಂದ ಅಭಿನಂದನೆ ಸಲ್ಲಿಸುತ್ತೇನೆ ಎಂದಿದ್ದಾರೆ.

ನಿಮ್ಮೂರಿನ ಸುದ್ದಿ, ಈಗ ‘ಸುದ್ದಿ ಒನ್’ ನಲ್ಲಿ!
ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.
🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.






[ad_2]
Source link
















Leave a Reply