Advertisement

ದಾವಣಗೆರೆ: ಬಂಡಾಯದಿಂದ ಹಿಂದೆ‌ ಸರಿದು‌ ಕಾಂಗ್ರೆಸ್ ಗೆ ಜೈ ಎಂದ ಪೈಲ್ವಾನ್; ಸಿಎಂ ಸಂಧಾನ ಸಕ್ಸಸ್​; ಬಿಜೆಪಿ- ಕಾಂಗ್ರೆಸ್ ನೇರಾ-ನೇರಾ ಫೈಟ್ » Dvgsuddi Kannada | online news portal

[ad_1]

ದಾವಣಗೆರೆ: ದಾವಣಗೆರೆ ದಕ್ಷಿಣ ಉಪ ಚುನಾವಣೆ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಕಾಂಗ್ರೆಸ್ ಗೆ ಬಂಡಾಯ ಬಿಸಿ ಮುಟ್ಟಿಸಿದ್ದ ಸಾದಿಕ್ ಪೈಲ್ವಾನ್, ಇಂದು ಮಹತ್ವದ ಬೆಳವಣಿಗೆಯಲ್ಲಿ ಸಿಎಂ ಸಿದ್ದರಾಮಯ್ಯ ನಡೆಸಿದ ಸಂಧಾನ ಯಶಸ್ವಿಯಾಗಿದ್ದು, ಕಾಂಗ್ರೆಸ್ ಪಕ್ಷಕ್ಕೆ ಜೈ ಎಂದಿದ್ದಾರೆ. ಈ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಮುಸ್ಲಿಂ ಮತಗಳ ವಿಭಜನೆಯ ಆತಂಕವನ್ನು ತಡೆಯುವಲ್ಲಿ ಸಿಎಂ ಸಿದ್ದರಾಮಯ್ಯ ಸಕ್ಸಸ್ ಆಗಿದ್ದಾರೆ.

ದಾವಣಗೆರೆ: ನಕಲಿ ಬಂಗಾರ‌ ನೀಡಿ ವಂಚನೆ; ಓರ್ವ ಆರೋಪಿತನ ಬಂಧನ: 7.50 ಲಕ್ಷ ನಗದು‌ ವಶ

ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಮನವೊಲಿಕೆ

ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್​ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಸಾಧಿಕ್​ ಪೈಲ್ವಾನ್​​, ನಿನ್ನೆ ನಾಮಪತ್ರ ವಾಪಸ್ ಪಡೆಯಲು ಕಡೆ‌ದಿನವಾಗಿದ್ದರೂ ವಾಪಸ್ ಪಡೆಯದೇ ಕಣದಲ್ಲಿ ಉಳಿಸದಿದ್ದರು. ಆದರೆ, ಇಂದು ಸಿಎಂ ಸಿದ್ದರಾಮಯ್ಯ ನೇರವಾಗಿ ಕರೆಸಿ ಮಾತುಕತೆ ನಡೆಸಿ ಮನವೊಲಿಸಿದ್ದಾರೆ. ಇದು ಕಾಂಗ್ರೆಸ್​​ ಅಭ್ಯರ್ಥಿ ಸಮರ್ಥ್ ಶಾಮನೂರಗೆ ಅನುಕೂಲವಾಗಲಿದೆ.

ದಾವಣಗೆರೆ ಉಪ ಚುನಾವಣೆ; ಕಾಂಗ್ರೆಸ್ ಗೆ ಬಂಡಾಯ ಬಿಸಿ ; ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ನಿರಾಕರಣೆ; ಕಾಂಗ್ರೆಸ್ ನಾಯಕರ ಸಂಧಾನಕ್ಕೂ ಬಗ್ಗದ ಪೈಲ್ವಾನ್

ಕೆಲವು ಷರತ್ತಿನೊಂದಿಗೆ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ

ಶಾಸಕ ರಿಜ್ವಾನ್ ಹರ್ಷದ್ ಅವರ ನೇತೃತ್ವದಲ್ಲಿ ಸಾಧಿಕ್ ಪೈಲ್ವಾನ್ ಕಾವೇರಿ ನಿವಾಸದಲ್ಲಿ ಭೇಟಿಯಾದ ಸಾದಿಕ್ ಮತ್ತು ಬೆಂಬಲಿಗರು ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಚರ್ಚೆ ನಡೆಸಿದ್ದಾರೆ. ಸುಮಾರು ಒಂದು ಗಂಟೆಯಷ್ಟು ನಡೆದ ಈ ಮಾತುಕತೆಯಲ್ಲಿ ಸಿಎಂ ಸಿದ್ದರಾಮಯ್ಯ ಸಾಧಿಕ್ ಪೈಲ್ವಾನ್ ರನ್ನು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸುವಂತೆ ಮನವೊಲಿಸಿದರು. ಕೊನೆಗೂ ಸಾಧಿಕ್​ ಪೈಲ್ವಾನ್​ ಕೆಲವು ಷರತ್ತುಗಳ ಮೂಲಕ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಜೈ ಎಂದಿದ್ದಾರೆ.

ಸಿಎಂ ಕೊಟ್ಟ ಭರವಸೆ ಏನು?

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಅಲ್ಪಸಂಖ್ಯಾತರಿಗೆ ಟಿಕೆಟ್ ಕೊಡಿಸುತ್ತೇನೆ. ನಿಮಗೂ ನಿಗಮ-ಮಂಡಳಿಗಳಲ್ಲಿ ಸ್ಥಾನಮಾನ ನೀಡುತ್ತೇನೆ. ಮಲ್ಲಿಕಾರ್ಜುನ್ ಅವರ ನಡುವೆ ಯಾವುದೇ ಭಿನ್ನಾಭಿಪ್ರಾಯವಿದ್ದರೂ ಅದನ್ನು ನಾನೇ ಬಗೆಹರಿಸುತ್ತೇನೆ. ಕಣದಿಂದ ನಿವೃತ್ತಿ ಹೊಂದಿ ಸಮರ್ಥ್ ಶಾಮನೂರು ಅವರಿಗೆ ಬೇಷರತ್ ಬೆಂಬಲ ನೀಡಿ ಎಂದು ಸಿಎಂ ಸಿದ್ದರಾಮಯ್ಯ ಪೈಲ್ವಾನ್​ ಮನವೊಲಿಕೆ ಮಾಡಿದ್ದಾರೆ.

ಶಾಮನೂರು ಶಿವಶಂಕರಪ್ಪ ನಿಧನ ನಂತರ ನಡೆಯುತ್ತಿರುವ ಉಪಚುನಾವಣೆಯಲ್ಲಿ ಈ ಬಾರಿ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡದೇ ಕುಟುಂಬದ ಅಭ್ಯರ್ಥಿ ಸಮರ್ಥ್ ಶಾಮನೂರು ಅವರಿಗೆ ಟಿಕೆಟ್ ನೀಡಿದ್ದಕ್ಕೆ ಅಸಮಾಧಾನಗೊಂಡು ಸಾಧಿಕ್ ಬಂಡಾಯ ಎದ್ದಿದ್ದರು. ಅವರ ಬಂಡಾಯದಿಂದ ಮುಸ್ಲಿಂ ಮತಗಳು ವಿಭಜನೆಯಾಗುವ ಆತಂಕ ಕಾಂಗ್ರೆಸ್ ಪಕ್ಷದಲ್ಲಿ ತೀವ್ರವಾಗಿತ್ತು.

ಈಗ ಸಿಎಂ ಮಧ್ಯಪ್ರವೇಶದಿಂದ ಸಂಧಾನ ಯಶಸ್ವಿಯಾಗಿದೆ ಸಮರ್ಥ್ ಶಾಮನೂರು ಅವರಿಗೆ ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದಾರೆ. ಇದರಿಂದ ದಾವಣಗೆರೆಯಲ್ಲಿ ತ್ರಿಕೋನ ಸ್ಪರ್ಧೆ ಬದಲಾಗಿ ಕಾಂಗ್ರೆಸ್ – ಬಿಜೆಪಿ ನೇರಾ ನೇರಾ ಸ್ಪರ್ಧೆಗೆ ಅಖಾಡ ಸಿದ್ಧವಾಗಿದೆ.

 

[ad_2]

Source link

Leave a Reply

Your email address will not be published. Required fields are marked *