[ad_1]
1
Mysore : ಚಾಮುಂಡಿ ಬೆಟ್ಟದ (Chamundi Hill) ತಪ್ಪಲಿನಲ್ಲಿರುವ ಸಿದ್ದಾರ್ಥ ಬಡಾವಣೆಯ ಸುರೇಶ್ ಎಂಬುವವರ ನಿವಾಸಕ್ಕೆ ಎಂಟ್ರಿ ಚಿರತೆಯೊಂದು ಎಂಟ್ರಿ ಕೊಟ್ಟಿದ್ದು, ಯಾರಿಗೂ ತಿಳಿಯದೆ 2 ಗಂಟೆ ಕಾಲ ಮನೆಯಲ್ಲಿಯೇ ಆಶ್ರಯ ಪಡೆದಿದೆ. ಅಲ್ಲದೆ 90ರ ಅಜ್ಜಿ ಅಜ್ಜಿ ಕೂಡ ಜೊತೆಯಲ್ಲಿಯೇ ಇದ್ದರು!


ಹೌದು, ಮೈಸೂರಿನ ಸಿದ್ದಾರ್ಥ ಬಡಾವಣೆಯ ಮನೆಯೊಂದಕ್ಕೆ ನುಗ್ಗಿದ ಚಿರತೆಯೊಂದು, ಸುಮಾರು ಎರಡೂವರೆ ಗಂಟೆಗಳ ಕಾಲ 90 ವರ್ಷದ ವೃದ್ಧೆಯ ಮಂಚದ ಕೆಳಗೆ ಅವಿತುಕೊಂಡಿತ್ತು. ವೃದ್ಧೆ ಶೈಲಜಾ ಅವರು ಹಾಸಿಗೆ ಹಿಡಿದಿದ್ದು, ಅವರಿಗೆ ನಡೆದಾಡಲು ಸಾಧ್ಯವಿಲ್ಲ. ಚಿರತೆ ಮನೆಯೊಳಗೆ ನುಗ್ಗಿದಾಗ ನೇರವಾಗಿ ಈ ಅಜ್ಜಿಯ ರೂಮಿಗೆ ಹೋಗಿ ಮಂಚದ ಕೆಳಗೆ ಮಲಗಿದೆ. ಸುಮಾರು ಎರಡೂವರೆ ಗಂಟೆಗಳ ಕಾಲ ಅಜ್ಜಿ ಮಂಚದ ಮೇಲೆ ಮಲಗಿದ್ದರೆ, ಮಂಚದ ಕೆಳಗೆ ಕ್ರೂರ ಮೃಗ ಚಿರತೆ ಮೌನವಾಗಿ ಕುಳಿತಿತ್ತು.
ಮನೆ ಮಾಲೀಕ ಸುರೇಶ್ ಅವರ ಪತ್ನಿ ಸುಜಾತ ಮತ್ತು ಕೆಲಸದ ಮಹಿಳೆ ಅದೇ ಕೊಠಡಿಗೆ ಬಂದು ಅಜ್ಜಿಗೆ ಔಷಧಿ ಹಚ್ಚಿದ್ದಾರೆ, ಆರೈಕೆ ಮಾಡಿದ್ದಾರೆ. ಆದರೆ ಅಚ್ಚರಿಯೆಂದರೆ ಅವರಿಬ್ಬರಿಗೂ ಮಂಚದ ಕೆಳಗೆ ಚಿರತೆ ಇರುವುದು ಗೊತ್ತೇ ಆಗಿಲ್ಲ! ಅಷ್ಟರಮಟ್ಟಿಗೆ ಆ ಚಿರತೆ ಅಂದು ಸೌಮ್ಯವಾಗಿ ವರ್ತಿಸಿತ್ತು. ಬಳಿಕ ಕೆಲಸ ಮಾಡುವಾಗ ಆಕಸ್ಮಿಕವಾಗಿ ಮಂಚದ ಕೆಳಗೆ ನೋಡಿದಾಗ ಬೆಳ್ಳಂಬೆಳ್ಳಗೆ ಚಿರತೆ ಕಂಡಿದೆ. ತಕ್ಷಣವೇ ಅವರೆಲ್ಲರೂ ಭಯದಿಂದ ನಡುಗಿದರೂ, ಧೈರ್ಯ ತಂದುಕೊಂಡು ಅಜ್ಜಿಯನ್ನು ಹೊರಕ್ಕೆ ಎತ್ತಿಕೊಂಡು ಬಂದು ರೂಮಿನ ಬಾಗಿಲು ಹಾಕಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಅರಣ್ಯ ಇಲಾಖೆಯು ಯಶಸ್ವಿಯಾಗಿ ಸೆರೆಹಿಡಿದು, ಎಲ್ಲರನ್ನೂ ಅಪಾಯದಿಂದ ಪಾರುಮಾಡಿದೆ.
ಮತ್ತೊಂದೆಡೆ ಸರಗೂರು ತಾಲೂಕಿನ ಹಾದನೂರು ಗ್ರಾಮದ ಹೊರ ವಲಯದಲ್ಲಿ ಹುಲಿ ಕಾಣಿಸಿಕೊಂಡಿದ್ದು, ಗ್ರಾಮದ ಜನರು ಆತಂಕಕ್ಕೆ ಒಳಗಾಗಿದ್ದಾರೆ.
[ad_2]
Source link


















Leave a Reply