Advertisement

ದಾವಣಗೆರೆ: ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಆಭರಣ ವಾರಸುದಾರರಿಗೆ ನೀಡಿ ಪ್ರಾಮಾಣಿಕ ಮೇರೆದ ಕೂಲಿ ಕಾರ್ಮಿಕ » Dvgsuddi Kannada | online news portal

[ad_1]

ದಾವಣಗೆರೆ: ಲಕ್ಷಾಂತರ ರೂಪಾಯಿ ಬೆಲೆ ಬಾಳುವ 55 ಗ್ರಾಂ ಬಂಗಾರ ಹಾಗೂ 88 ಗ್ರಾಂ ತೂಕದ ಆರಭರಣಗಳನ್ನು ವಾರಸುದಾರರಿಗೆ ನೀಡಿ ಪ್ರಾಮಾಣಿಕ ಮೇರೆದ ಕೂಲಿ ಕಾರ್ಮಿಕನಿಗೆ ಪೊಲೀಸರು ಸನ್ಮಾನ ಮಾಡಿದ್ದಾರೆ.

ದಾವಣಗೆರೆ: ಮೊರಾರ್ಜಿ ದೇಸಾಯಿ ಪ್ರಥಮ ಪಿಯುಸಿ ಪ್ರವೇಶಕ್ಕೆ ಅರ್ಜಿ ಆಹ್ವಾನ

ದಿನಾಂಕ: 22-04-2026 ರಂದು ಶಂಬುನಾಥ ಹನುಮಂತಪ್ಪ ಕಳಂಗ ಅವರು ಹರಪನಹಳ್ಳಿಯಿಂದ ದುಗ್ಗಾವತಿಗೆ ಕೆ.ಎಸ್.ಆರ್.ಟಿ.ಸಿ ಬಸ್ ನಲ್ಲಿ ಹತ್ತಿದ್ದರು. ಬಸ್ ಕ್ಯಾಬಿನ್ ನಲ್ಲಿ ತಮ್ಮ ರೊಟ್ಟಿ ಚೀಲವನ್ನು ಇಟ್ಟಿದ್ದು ಅವರ ಪಕ್ಕದಲ್ಲಿ ಅದೇ ರೀತಿಯ ಚೀಲ ಇದ್ದು ಅವರು ದುಗ್ಗಾವತಿಯಲ್ಲಿ ಬಸ್ ಇಳಿಯುವಾಗ ಅವರ ಚೀಲ ಬಿಟ್ಟು ಪಕ್ಕದಲ್ಲಿ ಅವರ ಚೀಲದಂತೆಯೆ ಇದ್ದ ಚೀಲವನ್ನು ತೆಗೆದುಕೊಂಡು ಇಳಿದು ಮನೆಗೆ ಹೋಗಿದ್ದರು.

ಮನೆಗೆ ಹೋದ ನಂತರ ರೊಟ್ಟಿ ತೆಗೆಯಲು ಚೀಲ ಬಿಚ್ಚಿದಾಗ ರೊಟ್ಟಿಯೊಂದಿಗೆ M.D. ಜುವೆಲರ್ಸ್ ಹರಪನಹಳ್ಳಿ ಇವರ ಬ್ಯಾಗ್ ಇದ್ದು ಅದರಲ್ಲಿ 55 ಗ್ರಾಂ ಬಂಗಾರ ಹಾಗೂ 88 ಗ್ರಾಂ ತೂಕದ ಆರಭರಣಗಳನ್ನು ನೋಡಿ ಇದು ನನ್ನ ಬ್ಯಾಗ್ ಅಲ್ಲ ಎಂದು ತನ್ನ ಸ್ನೇಹಿತರಿಗೆ ತಿಳಿಸಿ, ಕೂಡಲೇ ಆಭರಣ ಇರುವ ಬ್ಯಾಗ್ ತೆಗೆದು ಬಂಗಾರದ ಅಂಗಡಿಯವರಿಗೆ ಪೋನ್ ಮಾಡಿ ವಿಚಾರ ತಿಳಿಸಿದರು. ಮಾನವೀಯತೆ ದೃಷ್ಠಿಯಿಂದ ಆಭರಣಗಳನ್ನು ಆರ್.ಎಫ್.ದೇಸಾಯಿ ಹರಿಹರ ನಗರ ಠಾಣೆ ಪೊಲೀಸ್ ನಿರೀಕ್ಷಕರಿಗೆ ತಂದು ಒಪ್ಪಿಸಿರುತ್ತಾರೆ.

ಸದರಿಯವರ ಪ್ರಾಮಾಣಿಕತೆಗೆ ಮೆಚ್ಚಿ ಗ್ರಾಮಾಂತರ ಉಪ-ವಿಭಾಗದ ಪೊಲೀಸ್ ಉಪಾಧೀಕ್ಷಕರಾದಂತಹ ಶ್ರೀ ರುದ್ರಪ್ಪ ಉಜ್ಜನಕೊಪ್ಪ ರವರು ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಆಭರಣಗಳನ್ನು ಪೊಲೀಸ್ ಠಾಣೆಗೆ ನೀಡಿ ಪ್ರಾಮಾಣಿಕ ಮೇರೆದ ಶಂಬುನಾಥ ಹನುಮಂತಪ್ಪ ಕಳಂಗನವರ ಇವರನ್ನು ಪೊಲೀಸ್ ಇಲಾಖೆಯ ಪರವಾಗಿ ಪ್ರಮಾಣಿಕತೆಯನ್ನು ಶ್ಲಾಘಿಸಿ ಸನ್ಮಾನ ಮಾಡಿ ಗೌರವಿಸಿರುತ್ತಾರೆ. ಎಸ್ಪಿ ಶೇಖರ್.ಹೆಚ್ ಟಿ. ಹಾಗೂ ಎಎಸ್ಪಿ ಪರಮೇಶ್ವರ ಹೆಗಡೆ ಪ್ರಶಂಸಿದ್ದಾರೆ.

[ad_2]

Source link

Leave a Reply

Your email address will not be published. Required fields are marked *