Advertisement

ದಾವಣಗೆರೆ: ಪಿಯುಸಿ ನಂತರ ಕೃಷಿ ಪದವಿಗೆ ಉತ್ತಮ ಅವಕಾಶ; ತೋಟಗಾರಿಕೆ ತಜ್ಞ ಡಾ. ಬಸವನಗೌಡ » Dvgsuddi Kannada | online news portal

[ad_1]

ದಾವಣಗೆರೆ: ಪಿ.ಯು.ಸಿ ಶಿಕ್ಷಣದ ನಂತರ ವೃತ್ತಿಪರ ಪದವಿಗಳಲ್ಲಿ ಕೃಷಿ ಪದವಿಗೆ ಉತ್ತಮ ಅವಕಾಶವಿದೆ ಎಂದು ದಾವಣಗೆರೆಯ ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ತಜ್ಞ ಡಾ. ಬಸವನಗೌಡ ಎಂ.ಜಿ. ಅಭಿಪ್ರಾಯಪಟ್ಟರು.

ದಾವಣಗೆರೆ: ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಆಭರಣ ವಾರಸುದಾರರಿಗೆ ನೀಡಿ ಪ್ರಾಮಾಣಿಕ ಮೇರೆದ ಕೂಲಿ ಕಾರ್ಮಿಕ

ಕೇಂದ್ರದ ಆವರಣದಲ್ಲಿ “ಕೃಷಿ ಪದವಿಗಳು ಮತ್ತು ಅವಕಾಶಗಳು” ಕುರಿತು ಹಮ್ಮಿಕೊಂಡ ಒಂದು ದಿನದ ಕಾರ್ಯಗಾರದಲ್ಲಿ ಮಾತನಾಡಿದ ಅವರು, ಕೃಷಿ ಪದವಿಗಳ ನಂತರ ಸರ್ಕಾರಿ ಉದ್ಯೋಗಗಳ್ಳದೇ ಖಾಸಗಿ ವಲಯದಲ್ಲಿ, ಬ್ಯಾಂಕ್‌ಗಳಲ್ಲಿ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಅವಕಾಶವಿದ್ದು, ವಿದ್ಯಾರ್ಥಿಗಳು ಭವಿಷ್ಯವನ್ನು ರೂಪಿಸಿಕೊಳ್ಳಲು ಸಹಾಯವಾಗುವುದುಎಂದು ತಿಳಿಸಿದರು.

ತರಳಬಾಳು ಮಠದಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪಿಯುಸಿ ಉಚಿತ ಶಿಕ್ಷಣಕ್ಕೆ ಲಿಖಿತ ಪರೀಕ್ಷೆ

ಕಾರ್ಯಗಾರದಲ್ಲಿ ಸಿಇಟಿಯ ಮುಂದಿನ ಹಂತಗಳನ್ನು ವಿವರವಾಗಿ ತಿಳಿಸಿದ ಅವರು ಕೃಷಿ ಕೊಟಾದಡಿ ಪ್ರಾಯೋಗಿಕ ಪರೀಕ್ಷೆಗೆ ಸಿದ್ದರಾಗುವ ಕುರಿತು ಸಂಕ್ಷಿಪ್ತ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯಲ್ಲಿ ದೊರೆಯುವ ಅವಕಾಶಗಳ ಬಗ್ಗೆ ಉಪ ಕೃಷಿ ನಿರ್ದೇಶಕ ರೇವಣಸಿದ್ದನಗೌಡ ಹೆಚ್.ಕೆ., ತೋಟಗಾರಿಕೆ ಇಲಾಖೆಯ ಬಗ್ಗೆ ಸಹಾಯಕ ತೋಟಗಾರಿಕೆ ನಿರ್ದೇಶಕ ರಾಮಕೃಷ್ಣಹರಿ, ಪಶುಸಂಗೋಪನೆ ಇಲಾಖೆಯ ಅವಕಾಶಗಳ ಬಗ್ಗೆ ಡಾ. ಚಂದ್ರಶೇಖರ್ ಬಿ. ಸಹಕಾರ ಇಲಾಖೆಯಲ್ಲಿ ದೊರೆಯುವ ಸೇವೆಗಳ ಬಗ್ಗೆ  ಜಯಪ್ರಕಾಶ್‌ರಲ ವಿವರವಾದ ಮಾಹಿತಿಯನ್ನು ನೀಡಿದರು.

ಕಾರ್ಯಕ್ರಮದಲ್ಲಿ 8 ಜಿಲ್ಲೆಯ ವಿದ್ಯಾರ್ಥಿಗಳು ಮತ್ತು ಪೋಷಕರು ಭಾಗವಹಿಸಿದ್ದು ವಿಶೇಷವಾಗಿತ್ತು. ಕೇಂದ್ರದ ತಜ್ಞ ಬಿ.ಓ., ಡಾ. ಅವಿನಾಶ್ ಟಿ.ಜಿ., ಡಾ. ಸುಪ್ರಿಯಾ ಪಿ. ಪಾಟೀಲ್ ಮತ್ತು ಕುಮಾರಿ ಶ್ವೇತಾ ಹಾಜರಿದ್ದರು.

[ad_2]

Source link

Leave a Reply

Your email address will not be published. Required fields are marked *