Advertisement

ದಾವಣಗೆರೆ: ಸೋಲಿನಿಂದ ಕಾರ್ಯಕರ್ತರು ಹತಾಷರಾಗುವ ಅಗತ್ಯವಿಲ್ಲ; ಜಿಲ್ಲೆಯಲ್ಲಿ ಬಿಜೆಪಿ ಗತವೈಭವ ಮರುಕಳಿಸಲಿದೆ » Dvgsuddi Kannada | online news portal

[ad_1]

ದಾವಣಗೆರೆ: ದಾವಣಗೆರೆ ದಕ್ಷಿಣ ಉಪಚುನಾವಣೆ ಸೋಲಿನಿಂದ ಕಾರ್ಯಕರ್ತರು ಹತಾಷರಾಗುವ ಅಗತ್ಯವಿಲ್ಲ. 2028ರಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದ್ದು, ಜಿಲ್ಲೆಯಲ್ಲಿ ಬಿಜೆಪಿಯ ಗತವೈಭವ ಮರುಕಳಿಸಲಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅಭಿಪ್ರಾಯಪಟ್ಟರು.

ಉಪಚುನಾವಣೆಯಲ್ಲಿ ಸೋತಿರುವ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ದಾಸಕರಿಯಪ್ಪ ಮನೆಗೆ ಇಂದು (ಮೇ 5) ಭೇಟಿ ನೀಡಿ ಮಾತನಾಡಿದರು.

ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುವ ವಿಶ್ವಾಸವಿತ್ತು. ಆದರೆ,‌ಕಾಂಗ್ರೆಸ್ ಹಣ ಬಲ, ಅಧಿಕಾರ ಬಲದ ಮೇಲೆ ಗೆದ್ದಿದೆ. ಈ ಉಪ ಚುನಾವಣೆಯಲ್ಲಿ ಎಲ್ಲರೂ ಭಿನ್ನಾಭಿಪ್ರಾಯ ಬದಿಗಿಟ್ಟು ಶಕ್ತಿ ಮೀರಿ ಪ್ರಯತ್ನ ಮಾಡಿದೆವು. ಆದರೆ, ಅದೃಷ್ಟ ಕೈಹಿಡಿಯಲಿಲ್ಲ ಎಂದರು.

ಹರಿಹರ ಪಂಚಮಸಾಲಿ ಪೀಠದಲ್ಲಿ ಸ್ವಾಮೀಜಿ, ಟ್ರಸ್ಟಿಗಳ ನಡುವಿನ ಭಿನ್ನಾಭಿಪ್ರಾಯ; ಸಭೆ, ಸಮಾರಂಭ, ಸುದ್ದಿಗೋಷ್ಠಿಗೆ ನಿಷೇಧ

ಕಬಿಜೆಪಿ 70,000 ಮತ ಗಳಿಸುವ ಗುರಿ ಹೊಂದಿತ್ತು. ಗ್ರಾಮೀಣ ಪ್ರದೇಶದ ಮತಗಟ್ಟೆಗಳಲ್ಲಿ ಕನಿಷ್ಠ 5,000 ಮತಗಳ ಮುನ್ನಡೆಯನ್ನು ನಿರೀಕ್ಷಿಸಿದ್ದೆವು. ಆದರೆ, ಅಲ್ಲಿ 1,800 ಮತಗಳ ಮುನ್ನಡೆ ಸಾಧಿಸಲು ಮಾತ್ರ ಸಾಧ್ಯವಾಯಿತು.ಇನ್ನಷ್ಟಯ ಪ್ರಯತ್ನಪಡಬೇಕಿತ್ತು ಎಂದರು.

ಕ್ಷೇತ್ರದಲ್ಲಿ‌ ಶ್ರೀನಿವಾಸ ದಾಸಕರಿಯಪ್ಪ ಹೊಂದಿದ್ದ ಒಡನಾಟದಿಂದ ಬಿಜೆಪಿ ಗೆಲ್ಲುವ ಅವಕಾಶ ಇತ್ತು. ಆದರೂ ಗೆಲುವು ಸಾಧ್ಯವಾಗದೇ ಇರುವುದು ಬೇಸರ ಮೂಡಿಸಿದೆ’ ಎಂದರು.ಈ ಸೋಲಿನಿಂದ ಕಾರ್ಯಕರ್ತರು ಹತಾಷರಾಗುವ ಅಗತ್ಯವಿಲ್ಲ. ಶ್ರೀನಿವಾಸ ದಾಸಕರಿಯಪ್ಪ ಅವರಿಗೂ ಉತ್ತಮ ಭವಿಷ್ಯ ಇದೆ. ಜಿಲ್ಲೆಯಲ್ಲಿ ಪಕ್ಷ ಸಂಘಟನೆಯನ್ನು ಇನ್ನಷ್ಟು ಬಲಪಡಿಸುವ ಅಗತ್ಯವಿದೆ. ಎರಡು ವರ್ಷಗಳಲ್ಲಿ ಸಾರ್ವತ್ರಿಕ ಚುನಾವಣೆ ಎದುರಾಗಲಿದೆ. ಆಗ ಜಿಲ್ಲೆಯಲ್ಲಿ ಬಿಜೆಪಿ ಮತ್ತೆ ತನ್ನ ವೈಭವ‌ ಪಡೆಯಲಿದೆ ಎಂದರು.

ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ಮಾಜಿ ಶಾಸಕ ಎಸ್‌.ವಿ. ರಾಮಚಂದ್ರ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎನ್‌. ರಾಜಶೇಖರ್‌, ಮುಖಂಡರಾದ ಬಿ.ಜಿ. ಅಜಯ್‌ಕುಮಾರ್‌, ರಾಜನಹಳ್ಳಿ ಶಿವಕುಮಾರ್‌, ಜಿ.ಎಸ್‌. ಅನಿತ್‌ಕುಮಾರ್‌ ಹಾಜರಿದ್ದರು.

[ad_2]

Source link

Leave a Reply

Your email address will not be published. Required fields are marked *