Advertisement

ರಾಜ್ಯ ಮಟ್ಟದ ಕೃಷಿ ಕಾರ್ಯಾಗಾರ: ‘ಕೃಷಿ ಭಾಗ್ಯ’ ಉತ್ತಮ ಪ್ರದರ್ಶನಕ್ಕೆ ದಾವಣಗೆರೆ ಜಿಲ್ಲೆಗೆ ಪ್ರಥಮ ಸ್ಥಾನ » Dvgsuddi Kannada | online news portal

[ad_1]

ದಾವಣಗೆರೆ: ಬೆಂಗಳೂರಿನ ಕೃಷಿ ಇಲಾಖೆಯ ಕೇಂದ್ರ ಕಛೇರಿಯ ಸಂಗಮ ಸಭಾಂಗಣದಲ್ಲಿ ಮೇ 18 ರಿಂದ 19 ರವರೆಗೆ ಆಯೋಜಿಸಲಾಗಿದ್ದ 2026-27ನೇ ಸಾಲಿನ ಕೃಷಿ ಇಲಾಖೆಯ ರಾಜ್ಯ ಮಟ್ಟದ ಮುಂಗಾರು ಹಂಗಾಮು ಕಾರ್ಯಾಗಾರದಲ್ಲಿ, ಕೃಷಿ ಭಾಗ್ಯ ಯೋಜನೆಯಡಿ ಉತ್ತಮ ಪ್ರದರ್ಶಿಕೆಗಳನ್ನು ಪ್ರಸ್ತುತಪಡಿಸಿದ ದಾವಣಗೆರೆ ಜಿಲ್ಲೆಗೆ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪುರಸ್ಕಾರ ಲಭಿಸಿದೆ.

ದಾವಣಗೆರೆ: ವಿವಿಧ ಏರಿಯಾದಲ್ಲಿ ಸಂಜೆ 4 ಗಂಟೆವರೆಗೆ ವಿದ್ಯುತ್ ವ್ಯತ್ಯಯ

2025-26ನೇ ಸಾಲಿನಲ್ಲಿ ಕೃಷಿ ಇಲಾಖೆಯ ವಿವಿಧ ಯೋಜನೆ ಮತ್ತು ಕಾರ್ಯಕ್ರಮಗಳ ಅನುಷ್ಠಾನದ ಕುರಿತು ಹಮ್ಮಿಕೊಳ್ಳಲಾಗಿದ್ದ ಈ ಎರಡು ದಿನಗಳ ಕಾರ್ಯಾಗಾರವನ್ನು ಕರ್ನಾಟಕ ಸರ್ಕಾರದ ಸನ್ಮಾನ್ಯ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಉದ್ಘಾಟಿಸಿದ್ದರು. ಕೃಷಿ ಆಯುಕ್ತರಾದ ಶ್ರೀ ವೈ.ಎಸ್. ಪಾಟೀಲ್ ಹಾಗೂ ಕೃಷಿ ನಿರ್ದೇಶಕರಾದ ಡಾ. ಜಿ.ಟಿ. ಪುತ್ರ ಅವರು ಉಪಸ್ಥಿತರಿದ್ದು, ಇಲಾಖೆಯು ಸಾಧಿಸಿದ ಭೌತಿಕ ಹಾಗೂ ಆರ್ಥಿಕ ಪ್ರಗತಿ ಮತ್ತು ಮುಂಬರುವ ಮುಂಗಾರು ಹಂಗಾಮಿನ ಸಿದ್ಧತೆಗಳ ಕುರಿತು ಮಾತನಾಡಿದರು.

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ‘ಕೃಷಿ ಭಾಗ್ಯ’ ಅಡಿಯಲ್ಲಿ ಕೃಷಿ ಹೊಂಡಗಳ ಅನುಷ್ಠಾನದ ಕುರಿತು ದಾವಣಗೆರೆ ಜಿಲ್ಲೆಯು ಅತ್ಯುತ್ತಮ ಪ್ರದರ್ಶಿಕೆಗಳನ್ನು ಪ್ರಸ್ತುತಪಡಿಸಿದ್ದಕ್ಕಾಗಿ ಈ ಗೌರವ ಸಂದಿದೆ. ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ದಾವಣಗೆರೆ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕ ಜಿಯಾವುಲ್ಲಾ ಕೆ., ಉಪ ಕೃಷಿ ನಿರ್ದೇಶಕ ಭಾರತಮ್ಮ, ರೇವಣಸಿದ್ದನಗೌಡ ಹೆಚ್‌.ಕೆ., ತಿಪ್ಪೇಸ್ವಾಮಿ ಆರ್. ಹಾಗೂ ಸಹಾಯಕ ಕೃಷಿ ನಿರ್ದೇಶಕರಾದ ಶ್ರೀಧರಮೂರ್ತಿ ಡಿ.ಎಂ., ನಟರಾಜ್, ಶ ವಿಶ್ವನಾಥ್, ಅರುಣ್ ಕುಮಾರ್ ಮತ್ತು ಶ್ವೇತಾ ಪ್ರಶಸ್ತಿಯನ್ನು ಸ್ವೀಕರಿಸಿದರು ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

 

[ad_2]

Source link

Leave a Reply

Your email address will not be published. Required fields are marked *