Advertisement

ಹುಬ್ಬಳ್ಳಿ ಲವ್ ಜಿಹಾದ್ ಪ್ರಕರಣ -ತಮ್ಮ ಸಮೀರ್ ಗೆ ಅಕ್ಕ ತೈಸೀಮ್ ನಿಂದಲೇ ಹಿಂದೂ ಯುವತಿಯರ ಪೂರೈಕೆ?

[ad_1]

Hubballi : ಹುಬ್ಬಳ್ಳಿ ನಗರದಲ್ಲಿ ಲವ್​ ಜಿಹಾದ್​ ಆರೋಪ ಹಿನ್ನೆಲೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಜಿಮ್​ ಟ್ರೈನರ್​​ (Gym Trainer) ಸಮೀರ್ ಮನೆಗೆ ನುಗ್ಗಿದ ಹಿಂದೂ ಪರ ಸಂಘಟನೆಗಳು ಯುವಕನನ್ನು ಹಳೆ ಹುಬ್ಬಳ್ಳಿ ಠಾಣೆ ಪೊಲೀಸರಿಗೊಪ್ಪಿಸಿದ್ದಾರೆ. ಈ ಬೆನ್ನಲ್ಲೇ ಸಂತ್ರಸ್ತೆ ಯುವತಿ ಖುಷಿ ಕಲಬುರಗಿ ವಿಡಿಯೋ ಹರಿಬಿಟ್ಟಿದ್ದು ಭಾರಿ ಸಂಚಲನವನ್ನು ಸೃಷ್ಟಿಸಿದೆ. ಇದೀಗ ಆರೋಪಿ ಸಮೀರ್ ಆತನ ಅಕ್ಕ ತೈಸೀಮ್ ಹಿಂದೂ ಯುವತಿಯರನ್ನು ಪೂರೈಕೆ ಮಾಡುತ್ತಿದ್ದಳು ಎಂಬ ಗಂಭೀರ ಆರೋಪವನ್ನು ಕೇಳಿಬಂದಿದೆ.

ಹುಬ್ಬಳ್ಳಿ ನಗರದ ವಿಜಯನಗರ ನಿವಾಸಿಯಾಗಿರುವ ಸಮೀರ್ ಮತ್ತು ಹಿಂದೂ ಯುವತಿ ಜಿಮ್‌ನಲ್ಲಿ ಪರಿಚಯವಾಗಿತ್ತು. ಬಳಿಕ ಸಮೀರ್ ಯುವತಿಯೊಂದಿಗೆ ಸಲುಗೆ ಬೆಳೆಸಿದ್ದಾನೆ. ಬಳಿಕ ಯುವತಿಯನ್ನು ಮನೆಗೆ ಕರೆಯಿಸಿಕೊಂಡು ಜ್ಯೂಸ್​​ನಲ್ಲಿ ಮತ್ತು ಬರುವ ಔಷಧಿ ಬೆರೆಸಿ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ತನಿಕೆಯ ವೇಳೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಆರೋಪಿ ಸಮೀರ್ ನೀಚ ಕೃತ್ಯ ಇದೀಗ ಬಯಲಾಗಿದೆ. ಸಮೀರ್ ಮುಲ್ಲಾ ಮೊಬೈಲ್ ನಲ್ಲಿ ಹಿಂದೂ ಯುವತಿಯರ ಫೋಟೋಗಳು, ಗರ್ಭ ನಿರೋಧಕ ಮಾತ್ರೆಗಳ ಫೋಟೋ, ಸ್ಕಾನಿಂಗ್ ರಿಪೋರ್ಟ್ ಕೂಡ ಪತ್ತೆಯಾಗಿದೆ. ಈ ಬೆನ್ನಲ್ಲೇ ಬಂಧಿತನಾಗಿರುವ ಸಮೀರ್ ಮುಲ್ಲಾ ಪ್ರಕರಣದಲ್ಲಿ ಆತನ ಸಹೋದರಿ ತೈಸೀಮ್ ಮುಲ್ಲಾಳೇ ಕಿಂಗ್‌ಪಿನ್ ಎಂಬ ಸ್ಫೋಟಕ ಆರೋಪ ಕೇಳಿಬಂದಿದೆ. 

ಯಸ್, ಆರೋಪಿ ಸಮೀರ್ ಗೆ ಆತನ ಅಕ್ಕನೇ ಹಿಂದೂ ಯುವತಿಯರನ್ನು ಪೂರೈಕೆ ಮಾಡುತ್ತಿದ್ದಳು ಎಂಬ ಆರೋಪ ಕೇಳಿ ಬಂದಿದೆ. ಆಕೆ ಸಂತ್ರಸ್ತ ಯುವತಿಯನ್ನು ತನ್ನ ಸಹೋದರನಿಗೆ ಪರಿಚಯಿಸಿ, ಪಾರ್ಟಿಗಳಲ್ಲಿ ಏಕಾಂಗಿಯಾಗಿ ಬಿಡುತ್ತಿದ್ದಳು ಎನ್ನಲಾಗಿದೆ. ಯಾಕೆಂದರೆ ಸದ್ಯ ಹುಬ್ಬಳ್ಳಿಯಲ್ಲಿ ಸದ್ದು ಮಾಡುತ್ತಿರುವ ಲವ್ ಜಿಹಾದ್ ಪ್ರಕರಣದ ಸಂತ್ರಸ್ತೆ ಖುಷಿ ಮೊದಲು ತೈಸೀಮ್ ಮುಲ್ಲಾಳನ್ನು ಏರೋಬಿಕ್ಸ್ ಕ್ಲಾಸ್‌ನಲ್ಲಿ ಪರಿಚಯ ಮಾಡಿಕೊಂಡಿದ್ದಳು. ಅಲ್ಲಿಂದ ಶುರುವಾದ ಇವರ ಸ್ನೇಹವನ್ನು ತೈಸೀಮ್ ಅತ್ಯಂತ ಚಾಣಾಕ್ಷತನದಿಂದ ಬಳಸಿಕೊಂಡಿದ್ದಾಳೆ. ಸಂತ್ರಸ್ತ ಯುವತಿಯನ್ನು ತನ್ನ ಸಹೋದರ ಸಮೀರ್‌ಗೆ ಪರಿಚಯಿಸಿದ್ದೇ ಈ ತೈಸೀಮ್ ಎಂದು ಹೇಳಲಾಗುತ್ತಿದೆ.

ತೈಸೀಮ್ ಮುಲ್ಲಾ ಸಂತ್ರಸ್ತ ಯುವತಿಯೊಂದಿಗೆ ಅತಿಯಾದ ಆತ್ಮೀಯತೆ ಬೆಳೆಸಿಕೊಂಡಿದ್ದಳು. ಯಾವುದೇ ಬರ್ತ್‌ಡೇ ಪಾರ್ಟಿ ಇರಲಿ ಅಥವಾ ಹೋಟೆಲ್‌ಗಳಿಗೆ ಹೋಗುವ ಸಂದರ್ಭವಿರಲಿ, ತೈಸೀಮ್ ಸಂತ್ರಸ್ತೆಯನ್ನು ತನ್ನೊಂದಿಗೆ ಕರೆದುಕೊಂಡು ಹೋಗುತ್ತಿದ್ದಳು. ಅಲ್ಲಿ ತನ್ನ ಸಹೋದರ ಸಮೀರ್‌ನನ್ನು ಕರೆಸಿ, ಅವರಿಬ್ಬರ ನಡುವೆ ಸಂಬಂಧ ಬೆಳೆಯುವಂತೆ ಮಾಡುತ್ತಿದ್ದಳು. ಪಾರ್ಟಿಯ ಮಧ್ಯದಲ್ಲಿ ತೈಸೀಮ್ ತನ್ನ ಪತಿಯೊಂದಿಗೆ ಅಲ್ಲಿಂದ ಹೊರಟು ಹೋಗಿ, ಸಂತ್ರಸ್ತ ಯುವತಿಯನ್ನು ಸಮೀರ್ ಜೊತೆ ಏಕಾಂಗಿಯಾಗಿ ಬಿಡುತ್ತಿದ್ದಳು ಎನ್ನುವ ಗಂಭೀರ ಆರೋಪ ಕೇಳಿಬಂದಿದೆ.

banner

ಸಧ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತೈಸಿಮ್ ಮುಲ್ಲಾ, ಆಕೆಯ ಪತಿ, ಸಮೀರ್ ಮತ್ತು ಖುಷಿ ಸೇರಿಕೊಂಡಿರುವ ವಿಡಿಯೋಗಳು ಕೂಡ ಇದೀಗ ಹೊರಬಂದಿವೆ. ಈ ಎಲ್ಲಾ ಬೆಳವಣಿಗೆಗಳು ಪ್ರಕರಣವನ್ನು ಇನ್ನಷ್ಟು ಗಂಭೀರಗೊಳಿಸಿದೆ. ಲವ್‌ ಜಿಹಾದ್‌ಗೆ ಯತ್ನಿಸಿದ ಆರೋಪಿಗೆ ಕಠಿಣ ಶಿಕ್ಷೆ ನೀಡಬೇಕು. ಅಮಾಯಕ ಹಿಂದೂ ಯುವತಿಯರನ್ನು ಮೋಸದ ಬಲೆಗೆ ಸಿಲುಕಿಸುತ್ತಿರುವ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು. ಇಂತಹ ಘಟನೆ ಮರುಕಳಿಸದಂತೆ ಸರ್ಕಾರ ಕಠಿಣ ಕ್ರಮಕೈಗೊಳ್ಳಬೇಕೆಂದು ಒತ್ತಾಯ ಕೇಳಿಬಂದಿದೆ.



[ad_2]

Source link

Leave a Reply

Your email address will not be published. Required fields are marked *