[ad_1]
2
ಮುಂಬೈ: ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಬಂಧಿತನಾಗಿರುವ ಅಶೋಕ್ ಖಾರತ್ ನ ಪತ್ನಿ ಅನುರಾಧಾ ಹಾಗೂ ಆತನ ಆಪ್ತ ಸಹಾಯಕ ಜಿತೇಂದ್ರ ಶೆಲ್ಕೆ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ.


ಶುಕ್ರವಾರ ತಡ ರಾತ್ರಿ ಈ ಘಟನೆ ನಡೆದಿದ್ದು, ಖಾರತ್ ಪತ್ನಿ ಅನುರಾಧಾ ಕಾರಿನಲ್ಲಿ ತೆರಳುತ್ತಿದ್ದಾಗ ಅಹಲ್ಯಾನಗರ ಜಿಲ್ಲೆಯ ಸಮೃದ್ಧಿ ಹೆದ್ದಾರಿಯಲ್ಲಿ ಟ್ರಕ್ ವೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಅನುರಾಧಾ, ಜಿತೇಂದ್ರ ಸಾವಿಗೀಡಾಗಿದ್ದು, ಖಾರತ್ ಪುತ್ರ ಸುಜಿತ್ (I 4ವರ್ಷ) ಗಂಭೀರವಾಗಿ ಗಾಯಗೊಂಡಿದ್ದಾನೆ. ಈತನನ್ನು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡುತ್ತಿರುವುದಾಗಿ ವರದಿಯಾಗಿದೆ.
ಅನುರಾಧಾ. ಸುಜಿತ್ ಮತ್ತು ಶೆಲ್ಕೆ ಕಾರಿನಲ್ಲಿ ಛತ್ರಪತಿ ಸಂಭಾಜಿನಗರದಿಂದ ಶಿರ್ಡಿಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
[ad_2]
Source link

















Leave a Reply