Advertisement

ಮಕ್ಕಳನ್ನು ರಕ್ಷಣೆ ಮಾಡಲು ಹೋಗಿ 2 ತಿಂಗಳ ಗರ್ಭಿಣಿ ಜಲಸಮಾಧಿ

[ad_1]

ಚಿಕ್ಕಬಳ್ಳಾಪುರ: ಕೆರೆಯಲ್ಲಿ ಮುಳುಗಿತ್ತಿದ್ದ ಮಕ್ಕಳನ್ನು ರಕ್ಷಣೆ ಮಾಡಲು ಹೋದ ಗರ್ಭಿಣಿ ತಾಯಿ ತನ್ನ ಪ್ರಾಣ ತ್ಯಾಗ ಮಾಡಿರುವ ಘಟನೆ ಜಿಲ್ಲೆಯ ಚಿಂತಾಮಣಿ ತಾಲೂಕಿನ ಮುರುಗಮಲ್ಲಾದಲ್ಲಿ ನಡೆದಿದೆ.

ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಮುರುಗಮಲ್ಲಾದ ಅಮ್ಮಾಜಾನ್‌ ಬಾಬಾಜಾನ್‌ ದರ್ಶನಕ್ಕೆಂದು ಬಂದಿದ್ದಾಗ ಈ ದುರಂತ ನಡೆದಿದೆ. ಮೃತಪಟ್ಟ ಮಹಿಳೆ ತಬಾಸುಂ ಖಾನಂ (24) ಬೆಂಗಳೂರಿನ ಬನಶಂಕರಿ ನಿವಾಸಿ. ಈಕೆ ತನ್ನ ಮಕ್ಕಳೊಂದಿಗೆ ದರ್ಗಾ ದರ್ಶನಕ್ಕೆಂದು ಬಂದಿದ್ದರು.

ದರ್ಶನದ ನಂತರ ಕೆರೆಯ ಸಮೀಪ ಮಕ್ಕಳು ಆಟವಾಡುತ್ತಿದ್ದು, ನೀರಿನ ಆಳ ತಿಳಿಯದೆ ಏಕಾಏಕಿ ಮುಳುಗಲು ಆರಂಭಿಸಿದ್ದಾರೆ. ಮಕ್ಕಳು ಮುಳುಗುವುದನ್ನು ಕಂಡ ತಾಯಿ ತಬಾಸುಂ ಕ್ಷಣಾರ್ಧದಲ್ಲೇ ಕೆರೆಗೆ ಹಾರಿದ್ದಾರೆ. ಸ್ಥಳೀಯರು ಕೂಡಲೇ ಸ್ಪಂದಿಸಿ ಮಕ್ಕಳನ್ನು ರಕ್ಷಣೆ ಮಾಡಿದರೂ, ತಬಾಸುಂ ನೀರಿನ ಅಡಿಯಲ್ಲಿ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾರೆ.

ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಹಾಗೂ ಕೆಂಚಾರ್ಲಹಳ್ಳಿ ಪೊಲೀಸರು ಆಗಮಿಸಿದ್ದು, ಶೋಧ ಕಾರ್ಯಾಚರಣೆ ನಡೆಸಿ ಮೃತದೇಹವನ್ನು ಹೊರತೆಗೆದಿದ್ದಾರೆ. ಪ್ರಕರಣ ದಾಖಲಾಗಿದೆ.

The post ಮಕ್ಕಳನ್ನು ರಕ್ಷಣೆ ಮಾಡಲು ಹೋಗಿ 2 ತಿಂಗಳ ಗರ್ಭಿಣಿ ಜಲಸಮಾಧಿ appeared first on Hosakananda.

[ad_2]

Source link

Leave a Reply

Your email address will not be published. Required fields are marked *